ಕೆಎಲ್ ರಾಹುಲ್ ಅನುಪಸ್ಥಿತಿ: ಮುಂಬರುವ ಟಿ20 ಸರಣಿಗೆ ರಿಷಬ್ ಪಂತ್ ಗೆ ಉಪನಾಯಕ ಪಟ್ಟ!
ವೆಸ್ಟ್ ಇಂಡೀಸ್ ವಿರುದ್ಧ ಮುಂಬರುವ 3 ಪಂದ್ಯಗಳ ಟಿ20 ಸರಣಿಗೆ ಭಾರತದ ಟಿ20ಐ ತಂಡದ ಉಪನಾಯಕನಾಗಿ ರಿಷಬ್ ಪಂತ್ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನೇಮಕ ಮಾಡಿದೆ.
Published: 15th February 2022 03:48 PM | Last Updated: 15th February 2022 03:48 PM | A+A A-

ರಿಷಬ್ ಪಂತ್
ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ಮುಂಬರುವ 3 ಪಂದ್ಯಗಳ ಟಿ20 ಸರಣಿಗೆ ಭಾರತದ ಟಿ20ಐ ತಂಡದ ಉಪನಾಯಕನಾಗಿ ರಿಷಬ್ ಪಂತ್ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನೇಮಕ ಮಾಡಿದೆ.
ಭಾರತ ಫೆಬ್ರವರಿ 16 ರಿಂದ 20 ರವರೆಗೆ ಕೋಲ್ಕತ್ತಾದಲ್ಲಿ 3 ಟಿ20ಐಗಳನ್ನು ಆಡಲಿದೆ. ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್ ಟಿ20ಐ ಸರಣಿಯಲ್ಲಿ ರೋಹಿತ್ ಶರ್ಮಾ ಉಪನಾಯಕನಾಗಿ ಮುಂದುವರೆಯಲಿದ್ದಾರೆ.
ಕೆಎಲ್ ರಾಹುಲ್ ಅವರು ಏಕದಿನ ಸರಣಿಯ ಸಂದರ್ಭದಲ್ಲಿ ಮಂಡಿರಜ್ಜು ಗಾಯದಿಂದಾಗಿ ಟಿ20ಐ ಸರಣಿಗೆ ಲಭ್ಯವಾಗಿಲ್ಲ. ಭಾರತ ಗೆದ್ದು 3-0 ಸ್ವೀಪ್ ಪೂರ್ಣಗೊಳಿಸಿದ ಏಕದಿನ ಸರಣಿಯ ಅಂತಿಮ ಪಂದ್ಯಕ್ಕೆ ರಾಹುಲ್ ಆಟವನ್ನು ಆಡಲಿಲ್ಲ.
ರಿಷಬ್ ಪಂತ್ ಅವರನ್ನು ತಂಡದ ಭವಿಷ್ಯದ ನಾಯಕರಲ್ಲಿ ಒಬ್ಬರನ್ನಾಗಿ ಗುರುತಿಸಲಾಗಿದೆ. ದೆಹಲಿಯ ವಿಕೆಟ್ಕೀಪರ್ ಇಲ್ಲಿಯವರೆಗೆ ನಾಯಕತ್ವ ದಕ್ಕದಿದ್ದರೂ, ಉಪನಾಯಕತ್ವಕ್ಕೆ ಅವರ ಉನ್ನತೀಕರಣವು ಭವಿಷ್ಯದ ನಾಯಕತ್ವಕ್ಕಾಗಿ ಚೆಟ್ಟನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯು ರಿಷಬ್ ಪಂತ್ ಭರವಸೆ ಇಟ್ಟಿದೆ.
ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ 2ನೇ ಟೆಸ್ಟ್ನಲ್ಲಿ ಕೆಎಲ್ ರಾಹುಲ್ ಭಾರತವನ್ನು ಮುನ್ನಡೆಸಿದರೆ, ಜನವರಿಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಸರಣಿಯಲ್ಲಿ ಭಾರತವು 1-2 ಅಂತರದ ಸೋಲಿನ ನಂತರ ಕೊಹ್ಲಿ ಪಾತ್ರದಿಂದ ನಿರ್ಗಮಿಸಿದ ನಂತರ ಬಿಸಿಸಿಐ ಟೆಸ್ಟ್ ನಾಯಕನ ಘೋಷಣೆ ಮಾಡಿಲ್ಲ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಮುನ್ನಡೆಸುವ ಮೂಲಕ ರಿಷಬ್ ಪಂತ್ ನಾಯಕನಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಮೆಗಾ ಹರಾಜಿನಲ್ಲಿ ಮಾಜಿ ಫೈನಲಿಸ್ಟ್ ಗಳು ಆಕ್ರಮಣಕಾರಿ ವಿಕೆಟ್ಕೀಪರ್ ಸುತ್ತ ತಂಡವನ್ನು ನಿರ್ಮಿಸಿದ್ದರಿಂದ ಪಂತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡಿತು.