ಟಿ20 ನಾಯಕತ್ವ ಬಿಡದಂತೆ ವಿರಾಟ್ ಕೊಹ್ಲಿಗೆ ಮನವಿ ಮಾಡಿದ್ದೆವು; ಚೇತನ್ ಶರ್ಮಾ ಶಾಕಿಂಗ್ ಹೇಳಿಕೆ
ಟೀಂ ಇಂಡಿಯಾ ನಾಯಕತ್ವದ ವಿಚಾರವಾಗಿ ವಿರಾಟ್ ಕೊಹ್ಲಿ ಮಾಧ್ಯಮಗಳ ಮುಂದೆ ಸುಳ್ಳು ಹೇಳಿದ್ರಾ.. ಎಂಬ ಪ್ರಶ್ನೆ ಇದೀಗ ಉದ್ಭವವಾಗಿದ್ದು, ಇದಕ್ಕೆ ಕಾರಣ ತಂಡದ ಆಯ್ಕೆ ಸಮಿತಿ ಸದಸ್ಯ ಚೇತನ್ ಶರ್ಮಾ ಅವರ ಹೇಳಿಕೆ.
Published: 01st January 2022 09:11 AM | Last Updated: 01st January 2022 09:11 AM | A+A A-

ವಿರಾಟ್ ಕೊಹ್ಲಿ-ಚೇತನ್ ಶರ್ಮಾ
ನವದೆಹಲಿ: ಟೀಂ ಇಂಡಿಯಾ ನಾಯಕತ್ವದ ವಿಚಾರವಾಗಿ ವಿರಾಟ್ ಕೊಹ್ಲಿ ಮಾಧ್ಯಮಗಳ ಮುಂದೆ ಸುಳ್ಳು ಹೇಳಿದ್ರಾ.. ಎಂಬ ಪ್ರಶ್ನೆ ಇದೀಗ ಉದ್ಭವವಾಗಿದ್ದು, ಇದಕ್ಕೆ ಕಾರಣ ತಂಡದ ಆಯ್ಕೆ ಸಮಿತಿ ಸದಸ್ಯ ಚೇತನ್ ಶರ್ಮಾ ಅವರ ಹೇಳಿಕೆ.
ಹೌದು.. ವಿರಾಟ್ ಕೊಹ್ಲಿಯನ್ನು ನಾಯಕತ್ವ ತ್ಯಜಿಸದಂತೆ ಸಮಿತಿಯ ಎಲ್ಲರೂ ಹೇಳಿದ್ದೆವು ಎಂಬ ಚೇತನ್ ಶರ್ಮಾ ಹೇಳಿಕೆ ಕೊಹ್ಲಿ ಸುದ್ದಿಗೋಷ್ಠಿ ಮೇಲೆ ಅನುಮಾನ ಮೂಡುವಂತೆ ಮಾಡಿದೆ. ಈ ಹಿಂದೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ಏಕದಿನ ತಂಡವನ್ನು ಪ್ರಕಟಿಸಲಾಗಿದೆ. ರೋಹಿತ್ ಶರ್ಮಾ ಗಾಯದ ಸಮಸ್ಯೆಯಿಂದಾಗಿ ಏಕದಿನ ಸರಣಿಯಿಂದ ಹೊರಗುಳಿದಿದ್ದು, ಅವರ ಸ್ಥಾನಕ್ಕೆ ಕೆಎಲ್ ರಾಹುಲ್ ಅವರು ನಾಯಕತ್ವ ವಹಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ತಂಡದ ಆಯ್ಕೆಗೂ ಒಂದೂವರೆ ಗಂಟೆ ಮುಂಚೆ ನನಗೆ ತಿಳಿಸಿದ್ರು: ನಾಯಕತ್ವದಿಂದ ಕಿತ್ತು ಹಾಕಿದ ಬಗ್ಗೆ ಕೊಹ್ಲಿ ಹೇಳಿದ್ದು!
ಆದಾಗ್ಯೂ, ತಂಡದ ಘೋಷಣೆಯ ನಂತರ, ಮುಖ್ಯ ಆಯ್ಕೆದಾರರು ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ತೆಗೆದುಹಾಕುವ ಬಗ್ಗೆ ದೊಡ್ಡ ಹೇಳಿಕೆಯನ್ನು ನೀಡಿದರು. ಟಿ20 ನಾಯಕತ್ವವನ್ನು ಬಿಟ್ಟುಕೊಡಬೇಡಿ ಎಂದು ವಿರಾಟ್ ಕೊಹ್ಲಿಗೆ ಎಲ್ಲರೂ ಹೇಳಿದ್ದೇವು ಎಂದು ಚೇತನ್ ಶರ್ಮಾ ಹೇಳಿದ್ದಾರೆ. ಟಿ20 ವಿಶ್ವಕಪ್ಗೂ ಮುನ್ನ ವಿರಾಟ್ ಕೊಹ್ಲಿ ಅವರು ಟಿ20 ನಾಯಕತ್ವ ತೊರೆಯುವುದಾಗಿ ಹೇಳಿದ್ದರು. ಇದಾದ ನಂತರ, ವಿರಾಟ್ ಎದುರು ಕುಳಿತಿದ್ದ ಎಲ್ಲರೂ ಈ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಕೇಳಿಕೊಂಡರು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಈಗಿನ ಆಯ್ಕೆಗಾರರು ಶ್ರೇಷ್ಠರಾಗಿರಬಹುದು, ಆದರೆ ಕೊಹ್ಲಿ ಆಡಿದ ಅರ್ಧದಷ್ಟು ಪಂದ್ಯಗಳನ್ನೂ ಅವರು ಆಡಿಲ್ಲ: ಕೀರ್ತಿ ಆಜಾದ್
ಏಕದಿನ ತಂಡದ ಘೋಷಣೆಯ ನಂತರ ಚೇತನ್ ಶರ್ಮಾ ಮಾತನಾಡಿ, ವಿರಾಟ್ ಕೊಹ್ಲಿ ಟಿ20 ನಾಯಕತ್ವ ತೊರೆಯುವ ಬಗ್ಗೆ ಮಾತನಾಡುವಾಗ ಎಲ್ಲರೂ ದಿಗ್ಭ್ರಮೆಗೊಂಡರು. ಎಲ್ಲರೂ ವಿರಾಟ್ ಕೊಹ್ಲಿಗೆ ಟಿ20 ನಾಯಕತ್ವ ಬಿಟ್ಟುಕೊಡಬೇಡಿ ಎಂದು ಕೇಳಿಕೊಂಡೆವು. ವಿರಾಟ್ ಕೊಹ್ಲಿಯಂತಹ ಆಟಗಾರರು ಏಕಾಏಕಿ ಟಿ20 ನಾಯಕತ್ವ ತೊರೆಯುವ ಬಗ್ಗೆ ಮಾತನಾಡಿದರೆ ಎಲ್ಲರೂ ಬೆಚ್ಚಿ ಬೀಳುತ್ತಾರೆ. ವಿರಾಟ್ ಕೊಹ್ಲಿಯ ಈ ಘೋಷಣೆ 2021 ರ ಟಿ 20 ವಿಶ್ವಕಪ್ನಲ್ಲಿ ಭಾರತ ತಂಡದ ಮೇಲೂ ಪರಿಣಾಮ ಬೀರಬಹುದ್ದಾಗಿದ್ದರಿಂದ ಆಯ್ಕೆಗಾರರು ಅವರ ನಿರ್ಧಾರವನ್ನು ಪರಿಶೀಲಿಸುವಂತೆ ಕೇಳಿಕೊಂಡರು ಎಂದು ಚೇತನ್ ಶರ್ಮಾ ಹೇಳಿದ್ದಾರೆ.
ಇದನ್ನೂ ಓದಿ: ಕೊಹ್ಲಿಯಂತೆ ತಂಡ ಮುನ್ನಡೆಸಿದ ಯಾವ ನಾಯಕರೂ ಇಲ್ಲ; ನಾಯಕತ್ವ ವಿಚಾರವನ್ನು ಇನ್ನೂ ಉತ್ತಮವಾಗಿ ನಿಭಾಯಿಸಬಹುದಿತ್ತು: ರವಿಶಾಸ್ತ್ರಿ
ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಲು ಆಯ್ಕೆಗಾರರ ನಿರ್ಧಾರ
ವಿರಾಟ್ ಕೊಹ್ಲಿ ಟಿ20 ನಾಯಕತ್ವವನ್ನು ತೊರೆಯಲು ನಿರ್ಧರಿಸಿದಾಗ, ಆಯ್ಕೆಗಾರರು ಅವರನ್ನು ಏಕದಿನ ನಾಯಕತ್ವದಿಂದ ತೆಗೆದುಹಾಕಬೇಕಾಯಿತು ಎಂದು ಚೇತನ್ ಶರ್ಮಾ ಹೇಳಿದ್ದಾರೆ. ODI ಮತ್ತು T20 ಮಾದರಿಗಳಲ್ಲಿ ಒಬ್ಬನೇ ನಾಯಕನನ್ನು ಹೊಂದಿರಬೇಕೆಂದು ಆಯ್ಕೆಗಾರರು ಬಯಸಿದ್ದರು. ವಿರಾಟ್ಗೆ ನಾಯಕತ್ವ ತೊರೆಯುವಂತೆ ಯಾರೂ ಹೇಳಿಲ್ಲ. ಅವರು ಟಿ20 ನಾಯಕತ್ವವನ್ನು ತೊರೆದಾಗ, ಆಯ್ಕೆದಾರರು ಬಿಳಿ ಚೆಂಡಿನ ಕ್ರಿಕೆಟಿಗೆ ಒಬ್ಬನೇ ನಾಯಕನಿರಬೇಕು ಎಂಬುದು ನಮ್ಮ ತೀರ್ಮಾನವಾಗಿತ್ತು. ಈ ಬಗ್ಗೆ ವಿರಾಟ್ ಕೊಹ್ಲಿಗೆ ತಿಳಿಸಿದ್ದೆವು. ಅವರನ್ನು ಏಕದಿನ ನಾಯಕತ್ವದಿಂದ ತೆಗೆದುಹಾಕುವುದು ನಮ್ಮ ನಿರ್ಧಾರವಾಗಿತ್ತು. ಟಿ20 ನಾಯಕತ್ವದಿಂದ ಕೆಳಗಿಳಿಯುವುದು ಅವರ ನಿರ್ಧಾರವಾಗಿತ್ತು ಎಂದು ಚೇತನ್ ಶರ್ಮಾ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ರೋಹಿತ್ ಕ್ಯಾಪ್ಟನ್ ಆಗಿದ್ದು ಟೀಮ್ ಇಂಡಿಯಾಗೆ ಒಳ್ಳೆಯದು; ಇನ್ಮುಂದೆ ಕೊಹ್ಲಿ ಬ್ಯಾಟಿಂಗ್ನತ್ತ ಗಮನಹರಿಸಬಹುದು: ರವಿಶಾಸ್ತ್ರಿ
ಟೆಸ್ಟ್ ತಂಡದ ಆಯ್ಕೆಗೂ ಮುನ್ನ ಮಾಹಿತಿ
ಅಂತೆಯೇ ಟೆಸ್ಟ್ ತಂಡದ ಆಯ್ಕೆಗೆ 90 ನಿಮಿಷಗಳ ಮೊದಲು ವಿರಾಟ್ ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ತೆಗೆದುಹಾಕುವ ಬಗ್ಗೆ ಹೇಳಿದ್ದೇನೆ ಎಂದು ಚೇತನ್ ಶರ್ಮಾ ಹೇಳಿಕೊಂಡಿದ್ದಾರೆ. ಚೇತನ್ ಶರ್ಮಾ, ‘ನಾನೇ ವಿರಾಟ್ ಕೊಹ್ಲಿಗೆ ಕರೆ ಮಾಡಿದ್ದೆ. ನಾನು ವಿರಾಟ್ ಜೊತೆ ಚೆನ್ನಾಗಿ ಮಾತನಾಡಿದೆ. ಪ್ರಮುಖ ವಿಷಯವೆಂದರೆ ವಿರಾಟ್ ಕೊಹ್ಲಿ ಅತ್ಯಂತ ಪ್ರಮುಖ ಆಟಗಾರರಲ್ಲಿ ಒಬ್ಬರು. ಟೆಸ್ಟ್ ತಂಡದ ಆಯ್ಕೆ ಸಭೆಗೂ ಮುನ್ನವೇ ಅವರಿಗೆ ತಿಳಿಸಿದ್ದೆವು. ವಿರಾಟ್ ಮತ್ತು ನಮ್ಮ ನಡುವೆ ಯಾವುದೇ ಗೊಂದಲವಿಲ್ಲ. 90 ನಿಮಿಷಗಳ ಹಿಂದೆ, ಏಕದಿನ ನಾಯಕತ್ವದಿಂದ ತೆಗೆದುಹಾಕುವ ನಿರ್ಧಾರದ ಬಗ್ಗೆ ವಿರಾಟ್ಗೆ ತಿಳಿಸಲಾಗಿತ್ತು ಎಂದು ಹೇಳುವ ಮೂಲಕ ಎಲ್ಲಾ ಊಹಪೋಹಗಳಿಗೂ ಚೇತನ್ ಶರ್ಮಾ ತೆರೆ ಎಳೆದಿದ್ದಾರೆ.