social_icon

3ನೇ ಏಕದಿನ: ಗಿಲ್, ಕೊಹ್ಲಿ ಭರ್ಜರಿ ಶತಕ; ಲಂಕಾ ವಿರುದ್ಧ 390 ರನ್ ದಾಖಲೆಯ ಮೊತ್ತ ಕಲೆ ಹಾಕಿದ ಟೀಂ ಇಂಡಿಯಾ

ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ಲಂಕಾ ವಿರುದ್ಧ 390 ರನ್ ಗಳ ಬೃಹತ್ ಮೊತ್ತ ಕಲೆಹಾಕಿದೆ.

Published: 15th January 2023 06:09 PM  |   Last Updated: 16th January 2023 02:44 PM   |  A+A-


ಟೀಂ ಇಂಡಿಯಾ

Posted By : Vishwanath S
Source : Online Desk

ತಿರುವನಂತಪುರಂ: ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ಲಂಕಾ ವಿರುದ್ಧ 390 ರನ್ ಗಳ ಬೃಹತ್ ಮೊತ್ತ ಕಲೆಹಾಕಿದೆ.

ತಿರುವನಂತಪುರದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ 50 ಓವರ್‌ಗಳಲ್ಲಿ 3 ವಿಕೆಟ್‌ಗೆ 390 ರನ್ ಗಳಿಸಿತು. ಭಾರತ ತಂಡದ ಪರ ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದರು. ಈ ಮೂಲಕ ಶ್ರೀಲಂಕಾ ಗೆಲುವಿಗೆ 50 ಓವರ್‌ಗಳಲ್ಲಿ 391 ರನ್‌ಗಳ ಗುರಿ ನೀಡಲಾಗಿದೆ. ಆದಾಗ್ಯೂ, ಭಾರತ ತಂಡವು ಸರಣಿಯ ಮೊದಲ ಎರಡು ಪಂದ್ಯಗಳನ್ನು ಗೆದ್ದು ಸರಣಿ ಕೈವಶ ಮಾಡಿಕೊಂಡಿದೆ. ಆದರೆ ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ವೈಟ್ ವಾಶ್ ಮಾಡುವ ಯೋಜನೆಯಿದೆ.

ಇದನ್ನೂ ಓದಿ: ಭಾರತದಲ್ಲಿ 30+ ಆಟಗಾರರನ್ನು 80ರ ಮುದುಕರಂತೆ ನೋಡುತ್ತಾರೆ: ಬಿಸಿಸಿಐಗೆ ಗುಡ್ ಬೈ ಹೇಳಿ, ವಿದೇಶದತ್ತ ಮುಖ ಮಾಡಿದ ಟೀಂ ಇಂಡಿಯಾ ಓಪನರ್!

ಭಾರತದ ನಾಯಕ ರೋಹಿತ್ ಶರ್ಮಾ ಉತ್ತಮ ಆರಂಭವನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ರೋಹಿತ್ ಶರ್ಮಾ 49 ಎಸೆತಗಳಲ್ಲಿ 42 ರನ್ ಗಳಿಸಿದರು. ಆದರೆ, ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಭರ್ಜರಿ ಶತಕ ಬಾರಿಸಿದರು. ಶುಭಮನ್ ಗಿಲ್ 89 ಎಸೆತಗಳಲ್ಲಿ ಶತಕ ಪೂರೈಸಿದರು. ಒಟ್ಟಾರೆ 97 ಎಸೆತಗಳಲ್ಲಿ 116 ರನ್‌ ಗಳಿಸಿ ಔಟಾದರು. ಶುಬ್ಮನ್ ಗಿಲ್ ಅವರ ಇನ್ನಿಂಗ್ಸ್‌ನಲ್ಲಿ 14 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದರು. ಇನ್ನು ವಿರಾಟ್ ಕೊಹ್ಲಿ 85 ಎಸೆತಗಳಲ್ಲಿ 46ನೇ ಏಕದಿನ ಶತಕ ಪೂರೈಸಿದರು. ವಿರಾಟ್ ಕೊಹ್ಲಿ ಒಟ್ಟಾರೆ 110 ಎಸೆತಗಳಲ್ಲಿ 8 ಸಿಕ್ಸರೆ 13 ಬೌಂಡರಿಯೊಂದಿಗೆ ಅಜೇಯ 166 ರನ್ ಬಾರಿಸಿದರು.

ಅದೇ ಸಮಯದಲ್ಲಿ, ಶ್ರೇಯಸ್ ಅಯ್ಯರ್ 32 ಎಸೆತಗಳಲ್ಲಿ 38 ರನ್ ಕೊಡುಗೆ ನೀಡಿದರು. ನಂತರ ಬಂದ ಕೆಎಲ್ ರಾಹಲ್ 7 ಮತ್ತು ಸೂರ್ಯಕುಮಾರ್ ಯಾದವ್ 4 ರನ್ ಗೆ ಔಟಾದರು. 

ಲಂಕಾ ಪರ ರಜಿತಾ ಮತ್ತು ಲಹಿರು ಕುಮಾರಾ ತಲಾ ಎರಡು ವಿಕೆಟ್ ಪಡೆದರೆ ಕರುಣರತ್ನೆ 1 ವಿಕೆಟ್ ಪಡೆದಿದ್ದಾರೆ. 


Stay up to date on all the latest ಕ್ರಿಕೆಟ್ news
Poll
N R narayana Murty

ಯಾವುದನ್ನೂ ಫ್ರೀಯಾಗಿ ಕೊಡಬಾರದು ಎಂದು ಎನ್ ಆರ್ ನಾರಾಯಣ ಮೂರ್ತಿ ಹೇಳಿದ್ದಾರೆ.


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp