ಬಸ್‍ಗೆ ಬೆಂಕಿ; ತಪ್ಪಿದ ಅನಾಹುತ

ಕೆಎಸ್‍ಆರ್‍ಟಿಸಿ ಬಸ್‍ಗೆ ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಚಾಲಕ ಮತ್ತು ನಿರ್ವಾಹಕನ ಸಮಯ ಪ್ರಜ್ಞೆಯಿಂದಾಗಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜಾವಗಲ್: ಕೆಎಸ್‍ಆರ್‍ಟಿಸಿ ಬಸ್‍ಗೆ ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಚಾಲಕ ಮತ್ತು ನಿರ್ವಾಹಕನ ಸಮಯ ಪ್ರಜ್ಞೆಯಿಂದಾಗಿ ಭಾರಿ ಅನಾಹುತವೊಂದು ತಪ್ಪಿದ ಘಟನೆ ಜಾವಗಲ್ ಬಸ್‍ನಿಲ್ದಾಣದಲ್ಲಿ ಶುಕ್ರವಾರ ನಡೆದಿದೆ.

ಅರಸೀಕೆರೆ ಡಿಪೋದ ಬಸ್ ಬೇಲೂರಿನಿಂದ ಬಾಣಾವರಕ್ಕೆ ಹೋಗಲು ಜಾವಗಲ್ ಬಸ್ ನಿಲ್ದಾಣಕ್ಕೆ ಬೆಳಗ್ಗೆ 7 ಕ್ಕೆ ಬಂದು ನಿಂತಾಗ ಶಾರ್ಟ್ ಸರ್ಕಿಟ್‍ನಿಂದ ಬೆಂಕಿ ಹೊತ್ತಿಕೊಂಡಿತು.

ಕೂಡಲೇ ಚಾಲಕ ಶ್ರೀರಂಗಯ್ಯ, ನಿರ್ವಾಹಕ ಕೃಷ್ಣಮೂರ್ತಿ, ಟಿಸಿ ಸಿದ್ದೆಗೌಡ ಕೂಡಲೆ ಶೌಚಾಲಯ ಮತ್ತು ಹೋಟೆಲ್‍ನಿಂದ ನೀರು ತಂದು ಬೆಂಕಿ ನಂದಿಸಿದರು. ಟಿಸಿ ಸಿದ್ದೆಗೌಡ ಬಸ್‍ಗೆ ಜೋಡಿಸಿದ್ದ ಎಲೆಕ್ಟ್ರಿಕ್ ವೈರ್ ಸಂಪರ್ಕವನ್ನು ಕಡಿತಗೊಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com