ಅದೆಲ್ಲ ನಡೆದು ಎರಡು ವರ್ಷವಾಯಿತು. ಆದರೆ ಯಾವುದೇ ಮಹತ್ವದ ಕೆಲಸಗಳು ನಡೆದಿಲ್ಲ, ಗ್ರಾಮದ ಪರಿಸ್ಥಿತಿ ಹಾಗೆಯೇ ಉಳಿದಿದೆ. ಅಧಿಕಾರಿಗಳು ತಮ್ಮ ಗ್ರಾಮಕ್ಕೆ ಭೇಟಿ ಕೊಟ್ಟಾಗ ತಮ್ಮ ಸಮಸ್ಯೆ ಇನ್ನು ಕೊನೆಯಾಗಬಹುದು ಎಂದು ಖುಷಿಯಾಗಿದ್ದರು. ಆದರೆ ಆ ಖುಷಿ ಹೆಚ್ಚು ದಿನ ಉಳಿಯಲಿಲ್ಲ. ಪ್ರಧಾನಿಯ ಮಧ್ಯೆ ಪ್ರವೇಶಿಸಿ ಜಿಲ್ಲಾಡಳಿತ ಗ್ರಾಮಕ್ಕೆ ಒಮ್ಮೆ ಭೇಟಿ ಕೊಟ್ಟು ಪರಿಶೀಲಿಸಿತಾದರೂ ಅಷ್ಟೇ ಬೇಕ ಮರೆತುಬಿಟ್ಟಿತು. ತಮ್ಮ ಜೀವನಮಟ್ಟ ಸುಧಾರಿಸಲು ಏನೂ ಆಗಲಿಲ್ಲ ಎಂದ ಮೇಲೆ ನಾವಿನ್ನು ಯಾವುದೇ ನಿರೀಕ್ಷೆಯಿಟ್ಟುಕೊಂಡಿಲ್ಲ ಎಂದು ಗ್ರಾಮದವರು ಹೇಳುತ್ತಾರೆ.