ಅಂತೆಯೇ ಭರತ್ ದಾಸ್ ಬಾಪು ಕೂಡ ಯಾವುದೇ ಕಾರಣಕ್ಕೂ ಮತದಾನದಿಂದ ತಪ್ಪಿಸಿಕೊಳ್ಳದೇ ಇಂದು ತನ್ನ ಹಕ್ಕು ಚಲಾಯಿಸಿ, ತಾನೂ ಕೂಡ ಜವಾಬ್ದಾರಿಯುತ ಪ್ರಜೆ ಎಂಬುದನ್ನು ಸಾಬೀತು ಪಡಿಸಿದ್ದಾನೆ. ಈ ಬಗ್ಗೆ ಮಾತನಾಡಿರುವ ಭರತ್ ದಾಸ್ ಬಾಪು, ' ಈ ಗ್ರಾಮದಲ್ಲಿರುವ ಏಕೈಕ ಮತದಾರ ನಾನು. ನಾನು ನನ್ನ ಮತ ಹಾಕಿದ್ದು, ಇಲ್ಲಿ ಇದೀಗ ಶೇ.100ರಷ್ಟು ಮತದಾನವಾಗಿದೆ ಎಂಬ ಖುಷಿಯಿದೆ. ನನ್ನೊಬ್ಬನಿಗಾಗಿ ಆಯೋಗ ಇಷ್ಟೆಲ್ಲ ಖರ್ಚು ಮಾಡಿ ಕಷ್ಟ ಪಟ್ಟು ಮತಗಟ್ಟೆ ಸ್ಥಾಪನೆ ಮಾಡಿದೆ. ಆ ಮೂಲಕ ನನಗೂ ಮತದಾನಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ಹೇಳಿದ್ದಾರೆ.