ಮೊದಲು ಬಂದವರಿಗೆ ಆದ್ಯತೆ; ಗದಗ ಜಿಲ್ಲೆಯಲ್ಲೊಂದು 'ಚುನಾವಣೆ ದೇವರು'

ಇತ್ತೀಚಿನ ವರ್ಷಗಳಲ್ಲಿ ಚುನಾವಣೆಗೆ ನಿಲ್ಲುವ ರಾಜಕೀಯ ನಾಯಕರು ಗದಗ ಜಿಲ್ಲೆಯ ಗ್ರಾಮವೊಂದರಲ್ಲಿರುವ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಗದಗ: ಚುನಾವಣೆಗೆ ನಿಲ್ಲುವ ರಾಜಕೀಯ ನಾಯಕರಿಗೆ ಇದು ವಿಶೇಷ ಕ್ಷೇತ್ರ. ಗದಗ ಜಿಲ್ಲೆಯ ಗ್ರಾಮವೊಂದರಲ್ಲಿರುವ ಶಿವ ದೇವಸ್ಥಾನ ಅವರಿಗೆ ಶ್ರೀರಕ್ಷೆ. ದೇವಸ್ಥಾನಕ್ಕೆ ಭೇಟಿ ನೀಡುವ ಅಭ್ಯರ್ಥಿಗಳಿಗೆ ಈ ದೇವರ ಆಶೀರ್ವಾದ ಸಿಕ್ಕಿದರೆ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂಬ ನಂಬಿಕೆಯಿದೆ ಹಿಂದಿನಿಂದಲೂ. ಹೀಗಾಗಿ ಈ ಶಿವದೇವರನ್ನು ಚುನಾವಣೆಯ ದೇವರು ಎಂದು ಸುತ್ತಮುತ್ತಲ ಜನರು ಕರೆಯುತ್ತಾರೆ.
ಕಳೆದ 5 ದಶಕಗಳಿಂದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ಗೆಲುವಿಗೆ ಪ್ರಾರ್ಥಿಸುತ್ತಾರೆ.
2014ರಲ್ಲಿ ಶಿವಕುಮಾರ ಉದಾಸಿ ಸಂಸದ ಸ್ಥಾನಕ್ಕೆ ಸ್ಪರ್ಧಿಸುವ ಸಂದರ್ಭದಲ್ಲಿ ತಮ್ಮ ಪ್ರಚಾರವನ್ನು ಇಲ್ಲಿ ಸ್ಪರ್ಧಿಸಿ ಜಯ ಗಳಿಸಿದ್ದರು. ಯಾರೇ ಇಲ್ಲಿಗೆ ಪೂಜೆ ಸಲ್ಲಿಸಲು ಬಂದರೂ ಕೂಡ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂಬ ಪ್ರತೀತಿಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com