ನವದೆಹಲಿ: ಚುನಾವಣೆ ಫಲಿತಾಂಶದ ಪ್ರಕಟಣೆ ದಿನ ಕೆಲಸದ ಒತ್ತಡ, ಗಡಿಬಿಡಿಯಲ್ಲಿ ಖ್ಯಾತ ಪತ್ರಕರ್ತ, ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿ ಅವರು ಬಾಯ್ತಪ್ಪಿ ಸನ್ನಿ ಡಿಯೋಲ್ ಎನ್ನುವ ಬದಲು ಸನ್ನಿ ಲಿಯೋನ್ ಎಂದಿದ್ದಾರೆ.
ಇಂದು ಬೆಳಗ್ಗೆ ರಿಪಬ್ಲಿಕ್ ಟಿವಿಯ ಹವಾನಿಯಂತ್ರಿತ ಸ್ಟುಡಿಯೋದಲ್ಲಿ ಕುಳಿತು ಗುರ್ದಾಸ್ಪುರ ಕ್ಷೇತ್ರದಿಂದ ಸ್ಪರ್ಧಿಸಿದ ಪಂಜಾಬ್ ನ ಕುಡಿ ಸನ್ನಿ ಲಿಯೋನ್ ಅಂದುಬಿಟ್ಟರು. ನಂತರ ಸರಿಪಡಿಸಿ ಸನ್ನಿ ಡಿಯೋಲ್ ಎಂದು ಹೇಳಿದರು.