ಅಂದು ಪ್ರಧಾನಿ ಹುದ್ದೆಗೆ ರಾಜಿನಾಮೆ ನೀಡುವುದಕ್ಕೂ ಮುನ್ನ ಸಂಸತ್ ನಲ್ಲಿ ಭಾಷಣ ಮಾಡಿದ್ದ ವಾಜಪೇಯಿ ಅವರು, ಇಂದು ಒಬ್ಬ ಸಂಸದನ ಕೊರತೆಯಿಂದಾಗಿ ಸರ್ಕಾರ ಪತನವಾಗುತ್ತಿದೆ ಎಂದು ನೀವು (ಕಾಂಗ್ರೆಸ್) ಗೇಲಿ ಮಾಡುತ್ತಿದ್ದೀರಿ.. ಆದರೆ, ನನ್ನ ಮಾತು ಬರೆದಿಟ್ಟುಕೊಳ್ಳಿ. ಭಾರತದಾದ್ಯಂತ ನಾವು ಅತ್ಯಧಿಕ ಸಂಖ್ಯೆಯ ಸಂಸದರು ಮೂಲಕ ನಮ್ಮದೇ ಸರ್ಕಾರ ರಚಿಸುವ ದಿನ ಬರುತ್ತದೆ. ಆ ದಿನ ಇಡೀ ದೇಶ ನಿಮ್ಮತ್ತ ನೋಡಿ ನಗುತ್ತದೆ. ನಿಮ್ಮ ಬಗ್ಗೆ ಇಡೀ ದೇಶದ ಜನ ಹಾಸ್ಯ ಮಾಡುತ್ತಾರೆ' ಎಂದಿದ್ದರು.