ನವದೆಹಲಿ: ಲೋಕಸಭಾ ಚುನಾವಣೆಗೆ 11 ದಿನಗಳಷ್ಟೇ ಬಾಕಿ ಇದ್ದು, ಖಾಸಗಿ ಸುದ್ದಿ ವಾಹಿನಿಯೊಂದು ನಡೆಸಿದ ಚರ್ಚಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣಿಯನ್ ಸ್ವಾಮಿ ಮಾತನಾಡಿದ್ದಾರೆ. ಇದೇ ಚರ್ಚಾ ಕಾರ್ಯಕ್ರಮದಲ್ಲಿ ರಾಮಮಂದಿರ, ಪ್ರಿಯಾಂಕ ಗಾಂಧಿ ರಾಜಕೀಯ ಪ್ರವೇಶದ ಬಗ್ಗೆಯೂ ಸುಬ್ರಹ್ಮಣಿಯನ್ ಸ್ವಾಮಿ ಮಾತನಾಡಿದ್ದಾರೆ. ಅಯೋಧ್ಯೆ ವಿವಾದ ಮಾತುಕತೆ ಮೂಲಕ ಬಗೆಹರಿಯುವುದಕ್ಕೆ ಸಾಧ್ಯವಿಲ್ಲ. ಬಾಬ್ರಿ ಮಸೀದಿ ಇದ್ದ ಸ್ಥಳದಲ್ಲಿ ರಾಮನ ಜನ್ಮ ಸ್ಥಾನ ಇತ್ತು ಎಂಬುದು ಹಿಂದೂಗಳ ನಂಬಿಕೆ, ಇದು ನಂಬಿಕೆಯ ಪ್ರಶ್ನೆ, ಅದು ರಾಮ ಜನ್ಮಭೂಮಿಯಾದ ಕಾರಣ ಹಿಂದೂಗಳು ಅದನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ.