ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್ಡಿ ದೇವೇಗೌಡರ ಹೆಸರನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ ನಿಮ್ಮ ಮಹಾಘಟಬಂಧನದ ಮಿತ್ರ ಪಕ್ಷದ ನಾಯಕರೊಬ್ಬರು ಭಾರತಕ್ಕೆ ಇಬ್ಬಿಬ್ಬರು ಪ್ರಧಾನಿಗಳು ಬೇಕು ಎಂದಿದ್ದಾರೆ. ಕಾಶ್ಮೀರವನ್ನು ಪ್ರತ್ಯೇಕಗೊಳಿಸಿ, ಅಲ್ಲಿಗೆ ಬೇರೊಬ್ಬ ಪ್ರಧಾನ ಮಂತ್ರಿಯನ್ನು ನೇಮಕ ಮಾಡುವ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ದೇಶಕ್ಕೆ ಮಾರಕವಾಗುವಂತಹ ಇಂತಹ ಆಲೋಚನೆ ಬಗ್ಗೆ ನಿಮ್ಮ ನಿಲುವೇನು? ನೀವೂ ಬೇರೊಬ್ಬ ಪ್ರಧಾನ ಮಂತ್ರಿಯನ್ನು ಬಯಸುತ್ತೀರಾ? ನಿಮ್ಮ ನಿಲುವನ್ನು ಕರ್ನಾಟಕದ ಜನತೆ ಮುಂದೆ ಸ್ಪಷ್ಟಪಡಿಸಿ ಎಂದು ಸವಾಲು ಹಾಕಿದ್ದಾರೆ.