ಲೋಕಸಭೆ ಸಮೀಪದಲ್ಲಿರುವಂತೆ ಮೋದಿ ಕುರಿತಾದ ಚಿತ್ರದ ಬಿಡುಗಡೆ ಆಕ್ಷೇಪ ವ್ಯಕ್ತಪಡಿಸಿದ್ದ ಕಾಂಗ್ರೆಸ್, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು. ಚುನಾವಣಾ ಮಾದರಿ ನೀತಿ ಸಂಹಿತಿಯ ಉಲ್ಲಂಘನೆ ಎಂದು ಆಕ್ಷೇಪಿಸಿತ್ತು. ಚುನಾವಣಾ ಆಯೋಗ ನೀಡಿದ ನೋಟಿಸ್ ಗೆ ಉತ್ತರಿಸಲು ವಿವೇಕ್ ಓಬೆರಾಯ್ ಕಳೆದ ವಾರ ಆಯೋಗದ ಮುಂದೆ ಹಾಜರಾಗಿದ್ದರು. ಈ ವೇಳೆ ಮಾತನಾಡಿದ್ದ ಅವರು, 'ಮೋದಿ ಅವರನ್ನು ನಾಯಕನಾಗಿ ಬಿಂಬಿಸುತ್ತಿಲ್ಲ, ಅವರು ಈಗಾಗಲೇ ಹೀರೊ... ನನಗೆ ಮಾತ್ರ ಅಲ್ಲ, ದೇಶದ ಹಾಗೂ ಹೊರದೇಶಗಳ ಕೋಟ್ಯಂತರ ಜನರಿಗೂ ನಾಯಕರಾಗಿದ್ದಾರೆ. ನಾವು ತೆರೆಯ ಮೇಲೆ ತರುತ್ತಿರುವುದು ಸ್ಫೂರ್ತಿದಾಯಕ ಕಥೆಯನ್ನು' ಎಂದು ವಿವೇಕ್ ಹೇಳಿದ್ದಾರೆ.