ಇದಕ್ಕೆ ಮುನ್ನ ಇಂದು ಬೆಳಿಗ್ಗೆ ಟ್ವೀಟ್ ಮಾಡಿದ್ದ ಸಿನ್ಹಾ "ನಾನು ಭಾರತೀಯ ಜನತಾ ಪಕ್ಷ ತೊರೆಯುತ್ತಿದ್ದೇನೆ. ಇದು ನನಗೆ ಅತ್ಯಂತ ನೋವುಂಟು ಂಆಡಿದೆ. ಏಪ್ರಿಲ್ 6 ರಂದು ನಮ್ಮೆಲ್ಲರಿಗೂ ತಿಳಿದಿರುವಂತೆ ಪಕ್ಷದ ಸಂಸ್ಥಾಪನಾ ದಿನ. ನಾನು ಈ ಪಾರ್ಟಿಯಲ್ಲಿ ಭಾರತ ರತ್ನ ನಾನಾಜಿ ದೇಶಮುಖ್, , ದಿವಂಗತ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಮಾರ್ಗದರ್ಶನ ಮತ್ತು ಆಶೀರ್ವಾದದೊಂದಿಗೆ ಬೆಳೆದಿದ್ದೇನೆ. ಸ್ನೇಹಿತ ತತ್ವಜ್ಞಾನಿ, ಮಹಾನ್ ನೇತಾರ ಅಡ್ವಾನಿ ಅವರ ಮಾರ್ಗದರ್ಶನವಿತ್ತು, ಈಗ ಅವನ್ನು ತೊರೆದು ಹೋಗುತ್ತಿದ್ದೇನೆ