ಅತ್ತ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ಬೆನ್ನಲ್ಲೇ, ಈ ಕುರಿತು ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮೆಹಬೂಬ ಮುಫ್ತಿ, 'ನೀವು ಜಮ್ಮು ಮತ್ತು ಕಾಶ್ಮೀರವನ್ನು ಕಲಂ 370ರಿಂದ ತೆಗೆದು ಹಾಕಿದರೆ, ಭಾರತ ನಕ್ಷೆಯಿಂದ ಜಮ್ಮು ಮತ್ತು ಕಾಶ್ಮೀರವನ್ನು ತೆಗೆದು ಹಾಕಿದಂತೆ. ಈ ಕುರಿತು ನಾನು ಈ ಹಿಂದೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದೇನೆ. ಭಾರತ ದೇಶ ಮತ್ತು ಜಮ್ಮು ಮತ್ತು ಕಾಶ್ಮೀರದೊಂದಿಗೆ ಕಲಂ 370 ಸ್ನೇಹ ಸಂಪರ್ಕ ಸೇತುವೆಯಂತಿದ್ದು, ಅದನ್ನು ತೆಗೆದು ಹಾಕಿದ್ದೇ ಆದರೆ ಕಣಿವೆ ರಾಜ್ಯದ ಮೇಲೆ ಭಾರತ ತನ್ನ ಸಾರ್ವಭೌಮತ್ವವನ್ನು ಕಳೆದುಕೊಂಡಂತೆಯೇ.. ಆಗ ಕಾಶ್ಮೀರ ಭಾರತ ಆಕ್ರಮಿತ ಪ್ರದೇಶವಾಗುತ್ತದೆಯೇ ಹೊರತು ಭಾರತದ ಭಾಗವಾಗಿ ಉಳಿದಿರುವುದಿಲ್ಲ ಎಂದು ಹೇಳಿದ್ದಾರೆ.