ಛತ್ತೀಸ್ ಗಢದ ದುರ್ಗ್ ನಲ್ಲಿ ಮಾತನಾಡುತ್ತಾ ಉಮಾ ಭಾರತಿ"ಪ್ರಿಯಾಂಕಾ ಏಕೆ ಉತ್ತರ ಪ್ರದೇಶದ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತಾರೆ? ಅವರ ಪತಿ ಕಳ್ಳತನದ ಆರೋಪ ಎದುರಿಸುತ್ತಿದ್ದಾರೆ, ಭಾರತ ಅವರನ್ನು ಕಳ್ಳನ ಹೆಂಡತಿ ಎಂಬಂತೆ ಕಾಣುತ್ತಿದೆ" ಎಂದರು. ಅಲ್ಲದೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಮೇಥಿ ಹಾಗೂ ಕೇರಳದ ವಯನಾಡ್ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಮೂಲಕ ಅವರಾಗಲೇ ಸೋಲೊಪ್ಪಿಕೊಂಡಿದ್ದಾರೆ ಎಂದೂ ಹೇಳಿದ್ದಾರೆ. ಉಮಾ ಭಾರತಿ ದುರ್ಗ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಮತ ಪ್ರಚಾರ ನಡೆಸಿದ್ದ್ದಾರೆ.