ಗುಜರಾತ್ ನ ಸುರೇಂದ್ರನಗರದಲ್ಲಿ ನಡೆದ ಜನಾಕ್ರೋಶ ರ್ಯಾಲಿಯಲ್ಲಿ ಪಾಟಿದಾರ್ ಸಮುದಾಯದ ಮುಖಂಡ ಹಾರ್ದಿಕ್ ಪಟೇಲ್ ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದಂತೆ ಕಾರ್ಯಕರ್ತನೊಬ್ಬ ಬಂದು ಕಪಾಳಮೋಕ್ಷ ಮಾಡಿದ್ದಾನೆ. ಕಾರ್ಯಕರ್ತ ತನ್ನ ಬಳಿ ಧನ್ಯವಾದ ಅರ್ಪಿಸಲು ಬರುತ್ತಿದ್ದಾನೆ ಎಂದು ಹಾರ್ದಿಕ್ ಪಟೇಲ್ ಭಾವಿಸಿದ್ದ ಆದರೆ ಕಾರ್ಯಕರ್ತ ದಿಢೀರ್ ಅಂತಾ ಬಂದು ಕಪಾಳಕ್ಕೆ ಬಾರಿಸಿದ್ದಾನೆ. ಈ ವೇಳೆ ವೇದಿಕೆ ಮೇಲಿದ್ದ ಕಾಂಗ್ರೆಸ್ ಮುಖಂಡರು ಗಲಿಬಿಲಿಕೊಂಡರು.