ಆದರೆ ಇದೀಗ ಈ ಲೆಕ್ಕಾಚಾರಗಳನ್ನೆಲ್ಲಾ ಮೈತ್ರಿ ಪಕ್ಷಗಳು ಉಲ್ಟಾ ಮಾಡಿದ್ದು, ವಾರಣಾಸಿಯಲ್ಲಿ ತಮ್ಮದೇ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿವೆ. ಸ್ಥಳೀಯ ಕಾಂಗ್ರೆಸ್ ಶಾಸಕರ ಪುತ್ರಿ ಶಾಲಿನಿ ಯಾದವ್ ರನ್ನು ಬಿಎಸ್ ಪಿ ಮತ್ತು ಎಸ್ ಪಿ ಪಕ್ಷಗಳು ವಾರಣಾಸಿಯಿಂದ ಕಣಕ್ಕಿಳಿಸಿವೆ. ಮೈತ್ರಿ ಪಕ್ಷಗಳ ಈ ನಡೆ ಇದೀಗ ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಈ ಹಿಂದೆ ಅಂದರೆ 2014ರಲ್ಲಿ ಕಾಂಗ್ರೆಸ್ ಪಕ್ಷ ಇದೇ ವಾರಣಾಸಿಯಿಂದ ಕಾಂಗ್ರೆಸ್ ಪಕ್ಷ ಅಜಯ್ ರಾಯ್ ರನ್ನು ಕಣಕ್ಕಿಳಿಸಿತ್ತು. ಆದರೆ ಅಜಯ್ ರಾಯ್ ಮೋದಿ ವಿರುದ್ಧ ಬರೊಬ್ಬರಿ 5.8ಲಕ್ಷ ಮತಗಳ ಅಂತರದಲ್ಲಿ ಸೋತಿದ್ದರು.