ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್, "ನನಗೆ ಕಾವಲುಗಾರ ಬೇಕಾದರೆ ನೇಪಾಳಕ್ಕೆ ಹೋಗುತ್ತೇನೆ" ಎಂದು ಹೇಳಿದ್ದಾರೆ.
ಮತದಾನ ಮಾಡಿದ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಹಾರ್ದಿಕ್ ಪಟೇಲ್, ನನಗೆ ಕಾವಲುಗಾರ ಬೇಕೆಂಬುದಾದರೆ ನಾನು ನೇಪಾಳಕ್ಕೆ ಹೋಗುತ್ತೇನೆ, ನನಗೆ ಭಾರತದಲ್ಲಿ ಆರ್ಥಿಕತೆ, ಶಿಕ್ಷಣ, ಯುವಜನ ಸಬಲೀಕರಣ ಮಾಡಲು ಪ್ರಧಾನಿ ಬೇಕು, ಕಾವಲುಗಾರ ಬೇಕಿಲ್ಲ ಎಂದಿದ್ದಾರೆ.