"ಎನ್ ಡಿಎ ಮತ್ತೆ ಅಧಿಕಾರಕ್ಕೆ ಬರುತ್ತದೆ, ನರೇಂದ್ರ ಮೋದಿಯ ನಾಯಕತ್ವ ಜನರಿಗೆ ಮೆಚ್ಚುಗೆಯಾಗಿದೆ. ನಿಸ್ಸಂದೇಹವಾಗಿ ಜನಸಾಮಾನ್ಯರು ಮೋದಿಜಿ ಅವರನ್ನೇ ಮತ್ತೆ ಪ್ರಧಾನಿಯಾಗಿ ಕಾಣಲು ಬಯಸಿದ್ದಾರೆ. ವಾರಣಾಸಿ ಬೀದಿಗಳಲ್ಲಿ ಜನರು ಮೋದಿಯವರಿಗೆ ನೀಡಿದ ಸ್ವಾಗತವೇ ಇದಕ್ಕೆ ಸಾಕ್ಷಿಯಾಗಿದೆ. ಉತ್ತರ ಪ್ರದೇಶದ ಎಲ್ಲಾ ದಾಖಲೆಗಳನ್ನು ನಾವು ಈ ಚುನಾವಣೆಯಲ್ಲಿ ಮುರಿಯುತ್ತೇವೆ" ಅವರು ಹೇಳಿದರು.