ಕಾಂಗ್ರೆಸ್ ನ ಹಿರಿಯ ಮುಖಂಡ ಅಭಿಷೇಕ್ ಮನು ಸಿಂಘ್ವಿ, ಅಹ್ಮದ್ ಪಟೇಲ್, ತೃಣಮೂಲ ಕಾಂಗ್ರೆಸ್ ನ ದಿನೇಶ್ ತ್ರಿವೇದಿ ಮತ್ತು ಡೆರೆಕ್ ಒ ಬ್ರಿಯನ್ ನೇತೃತ್ವದಲ್ಲಿ ವಿರೋಧ ಪಕ್ಷಗಳ ನಿಯೋಗ ಮುಖ್ಯ ಚುನಾವಣಾಧಿಕಾರಿ ಸುನಿಲ್ ಅರೊರಾ ಅವರನ್ನು ಭೇಟಿ ಮಾಡಿ ಇಂತಹ ವಿದ್ಯುನ್ಮಾನ ಮತಯಂತ್ರಗಳನ್ನು ಉಳಿದ ಹಂತಗಳಲ್ಲಿ ತೆಗೆದುಹಾಕಬೇಕು ಅಥವಾ ಪಕ್ಷಗಳ ಹೆಸರುಗಳನ್ನು ವಿದ್ಯುನ್ಮಾನ ಮತಯಂತ್ರಗಳಲ್ಲಿ ಪಕ್ಷಗಳ ಚಿಹ್ನೆಯ ಮುಂದೆ ಸೇರಿಸಬೇಕು ಎಂದು ಒತ್ತಾಯಿಸಿದರು.