ನಾನು ತಡವಾಗಿ ಎದ್ದೆ, ಹೀಗಾಗಿ ಗಲಾಟೆ ಬಗ್ಗೆ ಗೊತ್ತಿಲ್ಲ: ಮೂನ್ ಮೂನ್ ಸೇನ್

ನನಗೆ 'ಬೆಡ್‌ ಟೀ ಕೊಡುವುದು ತಡ ಮಾಡಿದರು. ಹೀಗಾಗಿ ನಾನು ತಡವಾಗಿ ಎದ್ದೆ... ಗಲಾಟೆ ಬಗ್ಗೆ ನನಗೆ ಏನೂ ಗೊತ್ತಿಲ್ಲ' ಎಂದು ತೃಣಮೂಲ ಕಾಂಗ್ರೆಸ್​ ಅಭ್ಯರ್ಥಿ....
ಮೂನ್ ಮೂನ್ ಸೇನ್
ಮೂನ್ ಮೂನ್ ಸೇನ್
ಅಸನ್ಸೋಲಾ: ನನಗೆ 'ಬೆಡ್‌ ಟೀ ಕೊಡುವುದು ತಡ ಮಾಡಿದರು. ಹೀಗಾಗಿ ನಾನು ತಡವಾಗಿ ಎದ್ದೆ... ಗಲಾಟೆ ಬಗ್ಗೆ ನನಗೆ ಏನೂ ಗೊತ್ತಿಲ್ಲ' ಎಂದು ತೃಣಮೂಲ ಕಾಂಗ್ರೆಸ್​ ಅಭ್ಯರ್ಥಿ ಮೂನ್ ​ಮೂನ್​ ಸೇನ್ ಅವರು​ ಹೇಳಿದ್ದಾರೆ.
ಇಂದು ತಮ್ಮದೇ ಕ್ಷೇತ್ರದಲ್ಲಿ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಈ ಬಗ್ಗೆ ವರದಿಗಾರರು ಕೇಳಿದ ಪ್ರಶ್ನೆಗೆ ಟಿಎಂಸಿ ಅಭ್ಯರ್ಥಿ ಹಾಗೂ ನಟಿ ಮೂನ್‌ ಮೂನ್‌ ಸೇನ್‌ ಈ ರೀತಿ ಉತ್ತರ ನೀಡಿದ್ದಾರೆ.
ಪಶ್ಚಿಮ ಬಂಗಾಳದ ಅಸನ್ಸೋಲಾ ಮತಗಟ್ಟೆಯಲ್ಲಿ ಬಿಜೆಪಿ-ಟಿಎಂಸಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಪೊಲೀಸ್ ಲಾಠಿ ಚಾರ್ಜ್​ ಕೂಡ ಆಗಿದೆ. ಅಲ್ಲದೆ ಕೇಂದ್ರ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ಬಾಬುಲ್​ ಸುಪ್ರಿಯೋ ಅವರ ಕಾರು ಕೂಡ ಧ್ವಂಸವಾಗಿದೆ.
ಟಿಎಂಸಿ ಕಾರ್ಯಕರ್ತರು ಬೂತ್​ನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಜನರಿಗೆ ಮತದಾನ ಮಾಡಲು ಬಿಡುತ್ತಿಲ್ಲ ಎಂದು ಆರೋಪಿಸಿದ ಬಾಬುಲ್​ ಸುಪ್ರಿಯೋ ಹೇಳಿಕೆಗೆ ಏನು ಪ್ರತಿಕ್ರಿಯೆ ನೀಡುತ್ತಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಮೂನ್​ ಮೂನ್​ ಸೇನ್​, ಅವರ ಹೆಸರನ್ನು ಹೇಳಬೇಡಿ. ಅವರ ಬಗ್ಗೆ ಕೇಳಿದರೆ ನಾನು ಮಾತನಾಡುವುದಿಲ್ಲ ಎಂದಿದ್ದಾರೆ.
ನಾನು ಈ ಚುನಾವಣೆಯಲ್ಲಿ ಗೆಲ್ಲುವ ಆತ್ಮವಿಶ್ವಾಸದಲ್ಲಿದ್ದೇನೆ. ಮುಂದೇನಾಗುತ್ತದೆ ನೋಡೋಣ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com