ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ದೂರನ್ನು ಪರಿಶೀಲನೆ ಮಾಡಲಾಗಿದೆ. ಜಬಲ್ ಪುರದ ಚುನಾವಣಾ ಅಧಿಕಾರಿ ರಾಹುಲ್ ಗಾಂಧಿ ಭಾಷಣದ ವಿವರವನ್ನು ನೀಡಿದ್ದಾರೆ. ಆದರೆ ರಾಹುಲ್ ತಮ್ಮ ಭಾಷಣದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. ಮಧ್ಯಪ್ರದೇಶದಲ್ಲಿ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, ಹತ್ಯೆಯ ಆರೋಪಿ ಅಮಿತ್ ಶಾ ಬಿಜೆಪಿಯ ಅಧ್ಯಕ್ಷ ಎಂತಹ ಘನತೆ ಎಂದು ರಾಹುಲ್ ಗಾಂಧಿ ಹೇಳಿದ್ದರು.