ವಾರಣಾಸಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ನಾಮಪತ್ರ ಸಲ್ಲಿಕೆ ಮಾಡಿದ್ದ ತೆಲಂಗಾಣ ಮೂಲದ ಒಟ್ಟು 25 ಮಂದಿ ಅರಿಶಿಣ ಬೆಳೆಗಾರರ ಪೈಕಿ 24 ಮಂದಿಯ ನಾಮಪತ್ರ ತಿರಸ್ಕೃತವಾಗಿವೆ. ಈ ಬಗ್ಗೆ ಮಾಹಿತಿ ನೀಡಿರುವ ಚುನಾವಣಾಧಿಕಾರಿ, ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದ ತೆಲಂಗಾಣ ಮೂಲದ 25 ರೈತರ ಪೈಕಿ 24 ನಾಮಪತ್ರಗಳು ತಿರಸ್ಕೃತಗೊಂಡಿವೆ. ಇಸ್ತಾರಿ ಸನ್ನಮ್ ನರಸಯ್ಯ ಎಂಬ ರೈತರ ನಾಮಪತ್ರ ಮಾತ್ರ ಸ್ವೀಕಾರವಾಗಿದೆ ಎಂದು ಹೇಳಿದ್ದಾರೆ.