'ಮಸೂದ್ ಅಜರ್ ಕುಖ್ಯಾತ ಉಗ್ರ. ಮುಂಬೈ ದಾಳಿ ಮತ್ತು ಪುಲ್ವಾಮ ಉಗ್ರ ದಾಳಿಯ ರೂವಾರಿ..ಆತ ಪಾಕಿಸ್ತಾನದಲ್ಲಿರುವ ಭಯೋತ್ಪಾದನೆ ಕಾರ್ಖಾನೆಯ ನಿರ್ದೇಶಕನಾಗಿದ್ದು, ಭಾರತದಲ್ಲಿ ನಡೆದ ಬಹುತೇಕ ಉಗ್ರ ದಾಳಿಗಳ ಕಾರಣಕರ್ತ. ಭಾರತದ ನಂಬರ್ ಒನ್ ಶತ್ರು ಆತ. ಭಾರತವನ್ನು ತುಂಡು ತುಂಡಾಗಿ ಕತ್ತರಿಸುವ ಕನಸು ಹೊತ್ತಿದ್ದಾನೆ. 40 ಸೈನಿಕರ ಸಾವಿಗೆ ಕಾರಣವಾದ ಪುಲ್ವಾಮ ಉಗ್ರ ದಾಳಿ ಹಿಂದಿರುವ ಸೈತಾನ ಆತ. ಆದರೆ ಇಂತಹ ಉಗ್ರನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಿದರೆ, ಇದನ್ನೂ ಕಾಂಗ್ರೆಸ್ ನಾಯಕರು ಶಂಕೆಯಿಂದ ನೋಡುತ್ತಿದ್ದಾರೆ. ಚುನಾವಣಾ ಹೊತ್ತಿನಲ್ಲಿ ವಿಶ್ವಸಂಸ್ಥೆಯ ಈ ನಿರ್ಧಾರವನ್ನು ಅವರು ಶಂಕಿಸಿದ್ದಾರೆ. ಆದರೆ ಎಲ್ಲರೂ ಒಂದು ತಿಳಿಯಬೇಕು. ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಯಾವುದೇ ಸಮಯವಿಲ್ಲ. ಇದು ಖಂಡಿತಾ ಭಾರತದ ರಾಜತಾಂತ್ರಿಕತೆಗೆ ಸಿಕ್ಕ ಅತ್ಯಂತ ದೊಡ್ಡ ಗೆಲುವು.