ಭೂಪಾಲ್: ಗಾಂಧಿ-ನೆಹರು ಕುಟುಂಬದ ವಿರುದ್ಧ ಕೇಂದ್ರದ ಮಾಜಿ ಸಚಿವೆ ಉಮಾಭಾರತಿ ವಾಗ್ದಾಳಿ ನಡೆಸಿದ್ದಾರೆ. ಗಾಂಧಿ ಸರ್ ನೇಮ್ ಬಳಸುತ್ತಿರುವವರೆಲ್ಲಾ ನಕಲಿಗಳು ಎಂದು, ಮಹಾತ್ಮ ಮಾತ್ರ ನಿಜವಾದ ಗಾಂಧಿ ಎಂದು ಹೇಳಿದ್ದಾರೆ.
ಮೊಘಲರು ಹೋದರು, ನಂತರ ಬ್ರಿಟಿಷರು ಹೋದರು, ಆದರೆ ಅವರು ಕಾಂಗ್ರೆಸ್ ಅನ್ನು ಬಿಟ್ಟು ಹೋದರು. ಗಾಂಧಿ-ನೆಹರು ಕುಟುಂಬ, ನೆಹರು ನಿಜವಾದವರು, ಆದರೆ ಗಾಂಧಿ ಹೆಸರು ಬಳಸಿಕೊಳ್ಳುತ್ತಿರುವವರು ನಕಲಿಗಳು, ಮಹಾತ್ಮ ಮಾತ್ರ ನಿಜವಾದ ಗಾಂಧಿ ಎಂದು ಹೇಳಿದ್ದಾರೆ.
ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್ ಗೆ ಆಯೋಗ 72 ಗಂಟೆಗಳ ಕಾಲ ನಿಷೇಧ ಹೇರಿದ್ದರ ಕುರಿತು ಪ್ರತಿಕ್ರಿಯಿಸಿದ ಉಮಾ ಭಾರತಿ ನಾವು ರಾಮನ ಭಕ್ತರು ಹೀಗಾಗಿ ನಾವು ಚುನಾವಣಾ ಆಯೋಗದ ನಿರ್ದೇಶನವನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ.