ಪ್ರಧಾನಿ ಮೋದಿ ವಿರುದ್ಧ ಮಾತನಾಡಿದ್ದಕ್ಕೆ ಹಲ್ಲೆ- ಕೇಜ್ರಿವಾಲ್
ತಮ್ಮ ಮೇಲಿನ ಹಲ್ಲೆ ಕುರಿತಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾತನಾಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಇದು ಒಂಬತ್ತನೇ ಬಾರಿ ಹಾಗೂ ಮುಖ್ಯಮಂತ್ರಿ ಆದ ನಂತರ ನಡೆದ ಐದನೇ ಹಲ್ಲೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ನವದೆಹಲಿ: ತಮ್ಮ ಮೇಲಿನ ಹಲ್ಲೆ ಕುರಿತಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾತನಾಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಇದು ಒಂಬತ್ತನೇ ಬಾರಿ ಹಾಗೂ ಮುಖ್ಯಮಂತ್ರಿ ಆದ ನಂತರ ನಡೆದ ಐದನೇ ಹಲ್ಲೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಭಾರತದ ಇತಿಹಾಸದಲ್ಲಿ ಇಂತಹ ಹಲ್ಲೆಗಳು ಯಾವುದೇ ಮುಖ್ಯಮಂತ್ರಿ ಮೇಲೆ ನಡೆದಿರುವುದನ್ನು ನಾನು ಕೇಳಿಲ್ಲ. ಈ ದೇಶದಲ್ಲಿ ದೆಹಲಿ ಮುಖ್ಯಮಂತ್ರಿ ಭದ್ರತಾ ಜವಾಬ್ದಾರಿ ಮಾತ್ರ ಪ್ರತಿಪಕ್ಷದ ಕೈಯಲ್ಲಿದೆ. ಅದು ಬಿಜೆಪಿಯ ಕೈಯಲ್ಲಿದೆ ಎಂದು ಅವರು ಹೇಳಿದ್ದಾರೆ.
ಮೋದಿ ವಿರುದ್ಧ ಮಾತನಾಡುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ದಾಳಿ ಮಾಡಿದವರು ಹೇಳಿದ್ದಾರೆ. ಇದು ಸರ್ವಾಧಿಕಾರದ ಪ್ರತೀಕದಂತಿದ್ದು, ಭಿನ್ನ ಧ್ವನಿ ಎತ್ತದಂತೆ ಮಾಡಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.