ಸಿದ್ಧಾರ್ಥ್ ನಗರ್ ಜಿಲ್ಲೆಯ ದೋಮರಿಗಂಜ್ ಕ್ಷೇತ್ರದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಆದಿತ್ಯನಾಥ್ "ಸಬ್ಕಾ ಸಾಥ್, ಸಬ್ಕಾ ವಿಕಾಸ್ ಎಂಬ ತತ್ವವನ್ನು ಪ್ರಧಾನಿ ಮೋದಿ ನಂಬಿದ್ದಾರೆ. ಆದರೆ ಹಿಂದೆ ಪರಿಸ್ಥಿತಿ ವಿಭಿನ್ನವಾಗಿತ್ತು. ಹಿಂದೆ, ವಿದ್ಯುತ್ ಸಂಪರ್ಕಗಳನ್ನು ಜಾತಿ ಪದ್ದತಿಗಳ ಮೇಲೆ, ಧರ್ಮದ ಆಧಾರದಲ್ಲಿ ನೀಡಲಾಗಿತ್ತು. ಜನರು ಹೋಳಿ ಮತ್ತು ದೀಪಾವಳಿ ಗೆ ವಿದ್ಯುತ್ ಅಭಾವವನ್ನು ಎದುರಿಸುತ್ತಿದ್ದರೆ ಮೊಹರ್ರಂ ಹಾಗೂ ಈದ್ ಸಮಯದಲ್ಲಿ ಯತೇಚ್ಚವಾಗಿ ವಿದ್ಯುತ್ ಸರಬರಾಜಾಗುತ್ತಿದ್ದದ್ದು ಕಾಣುತ್ತಿದ್ದರು." ಎಂದು ದೂಷಿಸಿದ್ದಾರೆ.