ಓಂ ಪ್ರಕಾಶ್ ರಾಜ್ ಭರ್
ಓಂ ಪ್ರಕಾಶ್ ರಾಜ್ ಭರ್

ನಮ್ಮ ಪಕ್ಷ ಮುಗಿಸಲು ಬಿಜೆಪಿ ಹುನ್ನಾರ: ಎಸ್ ಬಿಎಸ್ ಪಿ ಅಧ್ಯಕ್ಷ ರಾಜ್ ಭರ್

ನಿನ್ನೆಯಷ್ಟೆ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದಿಂದ ಹೊರ ಬರುವುದಾಗಿ ಹೇಳಿದ್ದ ಸುಹೇಲ್ ದೇವ್ ಭಾರತೀಯ ಸಮಾಜ ಪಕ್ಷದ...
ಲಖನೌ: ನಿನ್ನೆಯಷ್ಟೆ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದಿಂದ ಹೊರ ಬರುವುದಾಗಿ ಹೇಳಿದ್ದ ಸುಹೇಲ್ ದೇವ್ ಭಾರತೀಯ ಸಮಾಜ ಪಕ್ಷದ(ಎಸ್ ಬಿಎಸ್ ಪಿ) ಅಧ್ಯಕ್ಷ ಓಂ ಪ್ರಕಾಶ್ ರಾಜ್ ಭರ್ ಅವರು, ಬಿಜೆಪಿ ನಮ್ಮ ಪಕ್ಷ ಮುಗಿಸಲು ಯತ್ನಿಸುತ್ತಿದೆ ಎಂದು ಮಂಗಳವಾರ ಆರೋಪಿಸಿದ್ದಾರೆ.
ಬಿಜೆಪಿ ನಾಯಕರು ತಮ್ಮ ಪಕ್ಷದ ಚಿಹ್ನೆ ಮೇಲೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ನನಗೆ ಒತ್ತಡ ಹಾಕುತ್ತಿದ್ದಾರೆ. ಆದರೆ ನನ್ನದೆ ಪಕ್ಷ ಇರಬೇಕಾದರೆ ನಾನು ಬೇರೆ ಪಕ್ಷದ ಚಿಹ್ನೆ ಮೇಲೆ ಏಕೆ ಸ್ಪರ್ಧಿಸಬೇಕು? ಇದು ನನ್ನ ಪಕ್ಷವನ್ನು ಮುಗಿಸುವ ಹುನ್ನಾರ ಎಂದು ಐಎಎನ್ಎಸ್ ಗೆ ನೀಡಿದ ಸಂದರ್ಶದಲ್ಲಿ ರಾಜ್ ಭರ್ ಹೇಳಿದ್ದಾರೆ.
ನಾನು ಬಿಜೆಪಿ ಜತೆ ಸೀಟು ಹಂಚಿಕೆ ಸಂಬಂಧ ಬಹಳ ದಿನಗಳಿಂದ ಕಾಯುತ್ತಿದೆ. ಆದರೆ ಆಡಳಿತರೂಢ ಪಕ್ಷ ಪದೇಪದೆ ನಿರ್ಧಾರ ಮುಂದೂಡುತ್ತಿದೆ ಎಂದು ರಾಜ್ ಭರ್ ದೂರಿದ್ದಾರೆ.
ಬಿಜೆಪಿಯವರಿಗೆ ರಾಜ್ ಭರ್ ಮತಗಳು ಬೇಕು. ಆದರೆ ಎಸ್ ಬಿಎಸ್ ಪಿಗೆ ಸೀಟು ಕೊಡಲು ಅವರು ಸಿದ್ಧರಿಲ್ಲ. ಅಲ್ಲದೆ ಅವರು ಪ್ರಚಾರಕ್ಕಾಗಿ ಪೋಸ್ಟರ್ ಗಳಲ್ಲಿ ನನ್ನ ಫೋಟೋ ಬಳಸುತ್ತಿದ್ದಾರೆ. ಈ ಕುರಿತು ನಾನು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇನೆ. ಆದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com