ಪ್ರಧಾನಿ ಮೋದಿ
ಪ್ರಧಾನಿ ಮೋದಿ

ವಿದ್ಯಾಸಾಗರ್ ಪ್ರತಿಮೆ ಧ್ವಂಸ, ಸಾಕ್ಷಿ ನಾಶಪಡಿಸಲು ಪೊಲೀಸರು ಪ್ರಯತ್ನ- ಪ್ರಧಾನಿ ಮೋದಿ

ವಿದ್ಯಾಸಾಗರ್ ಪ್ರತಿಮೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳನ್ನು ನಾಶಪಡಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಮಥುರಾಪುರ:  ವಿದ್ಯಾಸಾಗರ್  ಪ್ರತಿಮೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳನ್ನು ನಾಶಪಡಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದ ಮಥುರಾಪುರದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಮತಾ ಬ್ಯಾನರ್ಜಿ ಸೋಲಿನ ಭಯದಿಂದ ಹತಾಶೆಗೊಂಡಿದ್ದಾರೆ ಎಂದರು ಟೀಕಿಸಿದರು.
ವಿದ್ಯಾಸಾಗರ್ ಪ್ರತಿಮೆ ಧ್ವಂಸಗೊಳಿಸಿದವರಲ್ಲಿ ಟಿಎಂಸಿ ಗೂಂಡಾಗಳು ಇದ್ದಾರೆ. ಪೊಲೀಸರು ಇವರನ್ನು ರಕ್ಷಿಸುತ್ತಿದ್ದು,ಘಟನೆಗೆ ಸಂಬಂಧಿಸಿದ ಸಾಕ್ಷಿಗಳನ್ನು ನಾಶಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದ ಪ್ರಧಾನಿ,ಪ್ರತಿಮೆ ಧ್ವಂಸಗೊಳಿಸಿದವರನ್ನು ಸುಮ್ಮನೆ ಬಿಡುವುದಿಲ್ಲ , ಕಾನೂನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಕಠಿಣ ಸಂದೇಶ ರವಾನಿಸಿದರು.
ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭಯದಿಂದ ಮಮತಾ ಬ್ಯಾನರ್ಜಿ ಹತಾಶಗೊಂಡಿದ್ದಾರೆ.ಇದರಿಂದ ಆಕ್ರೋಶಗೊಂಡಿರುವ ಮಮತಾ ಬ್ಯಾನರ್ಜಿ  ಕೊಲ್ಕತ್ತಾಕ್ಕೆ ನಾನು ಬಾರದಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದರು.
ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಹಾಗೂ ಮಮತಾ ಬ್ಯಾನರ್ಜಿ ಜೋಡಿ ಬಂಗಾಳದಲ್ಲಿ ಲೂಟಿ ಮಾಡುವಲ್ಲಿ ಮಾತ್ರ ಹಿತಾಸಕ್ತಿ ಹೊಂದಿರುವುದಾಗಿ  ನರೇಂದ್ರ ಮೋದಿ ಟೀಕಿಸಿದರು

Related Stories

No stories found.

Advertisement

X
Kannada Prabha
www.kannadaprabha.com