ತೇಜ್ ಪ್ರತಾಪ್ ಭದ್ರತಾ ಸಿಬ್ಬಂದಿಯಿಂದ ಮಾಧ್ಯಮ ವ್ಯಕ್ತಿ ಮೇಲೆ ಹಲ್ಲೆ

ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಅವರ ಖಾಸಗಿ ಭದ್ರತಾ ಸಿಬ್ಬಂದಿ ಕ್ಯಾಮರಾಮನ್ ಮೇಲೆ ಹಲ್ಲೆ ನಡೆಸಿರುವ ಘಟನೆ ಇಂದು ನಡೆದಿದೆ.
ತೇಜ್ ಪ್ರತಾಪ್ ಯಾದವ್
ತೇಜ್ ಪ್ರತಾಪ್ ಯಾದವ್
ಪಾಟ್ನಾ: ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಅವರ ಖಾಸಗಿ ಭದ್ರತಾ ಸಿಬ್ಬಂದಿ ಕ್ಯಾಮರಾಮನ್ ಮೇಲೆ ಹಲ್ಲೆ ನಡೆಸಿರುವ ಘಟನೆ  ಇಂದು ನಡೆದಿದೆ.
ತೇಜ್ ಪ್ರತಾಪ್ ಯಾದವ್ ಅವರನ್ನು   ಮತಗಟ್ಟೆ ಬಳಿ ಚಿತ್ರೀಕರಿಸಲು ಮುಂದಾದಾಗ ಈ ಘಟನೆ ನಡೆದಿದೆ.  ಇಡೀ ಘಟನೆ ಹಿಂದೆ ನನನ್ನು ಹತ್ಯೆ ಮಾಡುವ ಸಂಚಿದೆ ಎಂದು ತೇಜ್ ಪ್ರತಾಪ್  ಆರೋಪಿಸಿದ್ದಾರೆ.
ಯಾದವ್ ಕಾರಿನ ಗಾಜು ಹೊಡೆದಿರುವ ಆರೋಪದ ಮೇರೆಗೆ ಯಾದವ್ ಭದ್ರತಾ  ಸಿಬ್ಬಂದಿ ಕ್ಯಾಮರಾಮನ್ ನನ್ನು ಥಳಿಸಿದ್ದಾನೆ.  ತೇಜ್ ಪ್ರತಾಪ್ ಯಾದವ್ ಮತ ಚಲಾಯಿಸಿ ಮತಗಟ್ಟೆಯಿಂದ ಹೊರ ಬಂದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com