ರಾತ್ರಿಯೆಲ್ಲ ಧ್ಯಾನ ಮುಗಿಸಿ ಬೆಳಿಗ್ಗೆ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ, ಮಾಧ್ಯಮಗಳೊಂದಿಗೆ ಮಾತನಾಡಿದ್ದು, " ಶನಿವಾರದಿಂದ ಕೇದಾರನಾಥದಲ್ಲಿದ್ದೆ. ದೀರ್ಘ ಅವಧಿಯ ನಂತರ ನನಗಾಗಿ ನಾನು ಸಮಯ ಪಡೆದಿದ್ದೆ. ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಲು ಅನುಮತಿ ನೀಡಿದ್ದ ಚುನಾವಣಾ ಆಯೋಗಕ್ಕೆ ಧನ್ಯವಾದ ತಿಳಿಸುತ್ತೇನೆ, ನಾನು ದೇವರಲ್ಲಿ ಏನನ್ನೂ ಪ್ರಾರ್ಥಿಸಲಿಲ್ಲ. ದೇವರು ನಮ್ಮನ್ನು ಸಮಾಜಕ್ಕೆ ಕೊಡುಗೆ ನೀಡುವ ಸಾಮರ್ಥ್ಯದೊಂದಿಗೆ ಸೃಷ್ಟಿಸಿದ್ದಾನೆ, ಬೇಡುವುದಕ್ಕಾಗಿ ಅಲ್ಲ ಎಂಬುದನ್ನು ನಂಬಿದ್ದೇನೆ" ಎಂದು ಹೇಳಿದ್ದಾರೆ.