ಮತ ಎಣಿಕೆ ನಿರ್ಣಾಯಕ ಹಂತ ತಲುಪಿದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ, ಎನ್ ಡಿಎ ಗೆ ಬಹುಮತ ದೊರೆತಿದೆ. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, ಮೋದಿ ದೇಶದ ಪ್ರಧಾನಿ ಅಂತ ಜನ ನಿರ್ಧಾರ ಮಾಡಿದ್ದಾರೆ. ದೇಶದ ಜನರೇ ನಮ್ಮ ಮಾಲಿಕರು, ಜನರ ತೀರ್ಪನ್ನು ಸ್ವಾಗತಿಸುತ್ತೇವೆ, ಸೋಲು ಗೆಲುವು ಸಾಮಾನ್ಯ. ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದ್ದಾರೆ.