ಹಾಸನ: ಬಿಜೆಪಿ ಅಭ್ಯರ್ಥಿ ಎ,ಮಂಜು ಅವರಿಗೆ ವ್ಯಕ್ತಿತ್ವವೂ ಇಲ್ಲ, ಸಿದ್ಧಾಂತವೂ ಇಲ್ಲ, ಅಧಿಕಾರ, ಹಣದ ಆಸೆಗಾಗಿ ಬಿಜೆಪಿ ಸೇರಿದ್ದಾರೆ ಎಂದು ಹಾಸನ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ,
ಹಾಸನದಲ್ಲಿ ಮಾತನಾಡಿದ ಪ್ರಜ್ವಲ್, ನಿಮ್ಮನ್ನು ಉಪಯೋಗಿಸಿಕೊಂಡು ಅಧಿಕಾರ ಅನುಭವಿಸಿದರು, ಬಿಜೆಪಿ ಸೇರುವಾಗ ಅವರು ಮುಸ್ಲಿಮರನ್ನು ಭೇಟಿ ಮಾಡಿದ್ದರಾ? ಈಗ ಅವರಿಗೆ ನೀವು ಬೇಡವಾಗಿದ್ದಿರಿ, ಯಾವ ಮುಖ ಇಟ್ಟುಕೊಂಡು ಅವರು ಮುಸ್ಲಿಮರ ಬಳಿ ಮತಯಾಚಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.