ಸಮನ್ವಯ ಸಮಿತಿ ಅಧ್ಯಕ್ಷರಾಗಿ ಹೇಗೆ ಮುಂದುವರಿಯುತ್ತೀರಿ ಎಂಬ ಪ್ರಶ್ನೆಗೆ, ನಾವು ಎರಡೂ ಪಕ್ಷ ದವರು ಒಟ್ಟಾಗಿ ಹೋಗುತ್ತೇವೆ, ಗೆಲ್ಲುತ್ತೇವೆ. ಹಳೆ ಮೈಸೂರಿನಲ್ಲಿ ನಾವು ಪರಸ್ಪರ ವಿರೋಧಿಗಳು, ಆರಂಭದಲ್ಲಿ ಅಪಸ್ವರ ಇದೆ, ಕಾಲಾನಂತರದಲ್ಲಿ ಎಲ್ಲವೂ ಸರಿಯಾಗಲಿದೆ. ಸಮನ್ವಯತೆ ಧಕ್ಕೆ ಆಗಿಲ್ಲ, ಮುಂದುವರಿಯುತ್ತೇವೆ. ಮುದ್ದಹನುಮೇಗೌಡರನ್ನು ನಾವೇ ಸಮಾಧಾನಿಸಿದ್ದೇವೆ. ಮೈಸೂರು ಸಮಸ್ಯೆ ಬಗೆಹರಿದಿದೆ. ಚುನಾವಣೆ ಸಂದರ್ಭ ಆಯಾರಾಮ್, ಗಯಾರಾಮ್ ಇದ್ದೇ ಇರುತ್ತದೆ. ಬಿಜೆಪಿಯಿಂದ ಕೂಡ ಸಾಕಷ್ಟು ಮಂದಿ ಬಂದಿದ್ದಾರೆ. ಇಲ್ಲಿಂದ ಕೆಲವರು ತೆರಳಿದ್ದಾರೆ. ಇದೆಲ್ಲ ಸಾಮಾನ್ಯ ಎಂದು ಎ. ಮಂಜು, ಸುಮಲತಾ ಬಗ್ಗೆ ಕೇಳಿದ ಪ್ರಶ್ನೆಗೆ ವಿವರಿಸಿದರು.