ಸಿದ್ದು, ನಾನು ಒಂಥರಾ `ಕಾಲೇಜ್ ಲವ್ವರ್ಸ್’: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮ್ಮ ನಡುವಿನ ಬಾಂಧವ್ಯ ಒಂಥರಾ ‘ಕಾಲೇಜ್ ಲವ್ವರ್ಸ್’ ನಡುವಿನ ಸಂಬಂಧವಿದ್ದಂತೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ...
ಸಿದ್ದರಾಮಯ್ಯ ಮತ್ತು ಎಚ್,ವಿಶ್ವನಾಥ್
ಸಿದ್ದರಾಮಯ್ಯ ಮತ್ತು ಎಚ್,ವಿಶ್ವನಾಥ್
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮ್ಮ ನಡುವಿನ ಬಾಂಧವ್ಯ ಒಂಥರಾ ‘ಕಾಲೇಜ್ ಲವ್ವರ್ಸ್’ ನಡುವಿನ ಸಂಬಂಧವಿದ್ದಂತೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಹೇಳಿದ್ದಾರೆ.
ಪ್ರೆಸ್ ಕ್ಲಬ್ ನಲ್ಲಿ ನಡೆದ ‘ಮಾತು ಮಂಥನ’ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿ, “ನಾವಿಬ್ಬರೂ ಕಾಲೇಜು ಲವ್ವರ್ಸ್ ಗಳ ಹಾಗೆ ಇರುವುದರಿಂದ ಕಣ್ಣಲ್ಲೇ ಮಾತನಾಡಿಕೊಳ್ಳುತ್ತೇವೆ ಎಂದು ಹೇಳಿದ್ದೇನೆ. ಕಾಲೇಜ್ ನಲ್ಲಿ ಲವ್ ಮಾಡಿದವರಿಗೆ ಮಾತ್ರ ನನ್ನ ಹಾಗೂ ಸಿದ್ದರಾಮಯ್ಯನವರ ಪ್ರೀತಿ ಅರ್ಥವಾಗುತ್ತೆ” ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಳೆಸಿದ್ದು ಒಕ್ಕಲಿಗರು, ಬೆಂಬಲ ನೀಡಿದ್ದು ಮಾತ್ರ ಅಹಿಂದ ಎಂದು ಹೇಳಿದ್ದಾರೆ, ತಾವು ಕಾಂಗ್ರೆಸ್ ತೊರೆದಿದ್ದೇಕೆ ಎಂಬ ಪ್ರಶ್ನೆಗೆ, “ನಾನು ಕಾಂಗ್ರೆಸ್ ಯಾಕೆ ಬಿಟ್ಟೆ ಎಂಬ ಪ್ರಶ್ನೆಗೆ ಸಿದ್ದರಾಮಯ್ಯನವರೇ ಉತ್ತರಿಸಬೇಕು” ಎಂದರು ನಾನು ಕಾಂಗ್ರೆಸ್ ತೊರೆಯುವ ವೇಳೆ ಹೈಕಮಾಂಡ್ ವೀಕ್ ಆಗಿತ್ತು ಎಂದು ತಿಳಿಸಿದರು. 
ರಾಜ್ಯದ ಸಮ್ಮಿಶ್ರ ಸರ್ಕಾರ ರೈತರ ಪರವಾಗಿದೆ. ಜೆಡಿಎಸ್ ಪ್ರಾದೇಶಿಕ ಪಕ್ಷವಾದರೂ ರಾಷ್ಟ್ರದ ಬಗ್ಗೆ ಚಿಂತನೆ ಮಾಡುತ್ತದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಒಂದು ದಿನವೂ ರೈತರ ಬಗ್ಗೆ ಮಾತನಾಡಿಲ್ಲ. 15 ಲಕ್ಷಕ್ಕೆ ಟೋಪಿ ಹಾಕಿದವರು ಈಗ 2 ಸಾವಿರ ರೂ. ರೈತರ ಖಾತೆಗೆ ಹಾಕುವುದಾಗಿ ಸುಳ್ಳು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com