ಚಲನಚಿತ್ರ ನಟರನ್ನು ನೋಡಲು ಸಾಮಾನ್ಯವಾಗಿ ಭಾರೀ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಅವರೆಲ್ಲರೂ ಅಭ್ಯರ್ಥಿಯ ಪರ ಮತ ಹಾಕುತ್ತಾರೆ ಎಂದೇನಿಲ್ಲ. ಕರ್ನಾಟಕದಲ್ಲಿ ಸಿನಿಮಾ ನಟರು ಯಶಸ್ವಿ ರಾಜಕಾರಣಿಗಳಾದ ಉದಾಹರಣೆಗಳು ಇಲ್ಲ. ರಾಜ್ ಕುಮಾರ್ ಅವರಲ್ಲಿ ಆ ಗುಣಗಳಿದ್ದವು, ಆದರೆ ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇರಲಿಲ್ಲ, ಬರಲೂ ಇಲ್ಲ. ಸುಮಲತಾ ಪರ ಪ್ರಚಾರ ನಡೆಸುತ್ತಿರುವ ಸಿನಿಮಾ ನಟರು ಆಡಿದ ಮಾತುಗಳನ್ನು ದೊಡ್ಡದು ಮಾಡಿ ಕೋಲಾಹಲ ಎಬ್ಬಿಸಿದ್ದು ಮಾಧ್ಯಮಗಳು, ಅವುಗಳಿಗೆ ಪ್ರಾಮುಖ್ಯತೆ ನೀಡಬೇಕಾಗಿಲ್ಲ ಎಂದು ಆರೋಪಿಸಿದರು.