ಕರ್ನಾಟಕದಲ್ಲಿ ಕೇವಲ ಸ್ವಾರ್ಥಕ್ಕಾಗಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದಾರೆ. ಕರ್ನಾಟಕ ಸರ್ಕಾರವನ್ನು ಸೋತ ಎರಡು ಪಕ್ಷಗಳು ಜೊತೆಗೂಡಿ ನಡೆಸುತ್ತಿದ್ದಾರೆ. ಎಲ್ಲಿ ಅವಕಾಶ ಸಿಗುತ್ತದೋ ಅಲ್ಲೆಲ್ಲಾ ಸಮಾಜವನ್ನು ಒಡೆದು ಆಳುವ ಯೋಜನೆ ಕಾಂಗ್ರೆಸ್ ನದ್ದಾಗಿದೆ. ರಾಜ್ಯ ಸರ್ಕಾರವನ್ನು ಯಾರು ನಡೆಸುತ್ತಿದ್ದಾರೆ ಯಾರಿಗೂ ಗೊತ್ತಿಲ್ಲ. ದೇಶದಲ್ಲೂ ಇಂಥಹದ್ದೇ ಸರ್ಕಾರ ರಚಿಸಲು ಯತ್ನಿಸುತ್ತಿದ್ದಾರೆ. ಒನಕೆ ಓಬವ್ವ, ಮದಕರಿ ನಾಯಕ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿದ್ದರು, ದೇಶವನ್ನೂ ಇದೇ ರೀತಿ ರಕ್ಷಿಸಬೇಕಿದೆ. ಪ್ರಧಾನ ಮಂತ್ರಿಗೆ ದೇಶದ ಜನತೆಯೇ ಹೈಕಮಾಂಡ್ ಆಗಿರಬೇಕು, ಇಷ್ಟೆಲ್ಲಾ ಸಾಧನೆಯಾಗಿರುವುದು ಮೋದಿ ಇಂದಲ್ಲ ನಿಮ್ಮಿಂದ ಎಂದು ಮೋದಿ ಜನತೆಗೆ ಹೇಳಿದ್ದಾರೆ.