ಇನ್ನು ಹಿಂದುತ್ವ, ರಾಷ್ಟ್ರೀಯತೆಯ ವಿಚಾರದಲ್ಲಿ ಪ್ರಬಲವಾಗಿರುವ ಈ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ, ದಲಿತರ ಕೂಗು ದುರ್ಬಲವಾಗಿದೆ.ಕಾಪು ನಿವಾಸಿಯಾದ ಅಕ್ಬರ್ ಅಲಿ ಕಾಂಗ್ರೆಸ್ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ದಾರೆ ". "ಅವರು ನಮಗೆ ಪ್ರಾತಿನಿಧ್ಯವನ್ನು ಅಥವಾ ಧ್ವನಿಯನ್ನು ನಿಡಲಾರರು, . ಈಗ, ಕಾಂಗ್ರೆಸ್ ಹೊರತುಪಡಿಸಿ ಬೇರೆ ಯಾರಾದರೂ ಸರಿ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ" :ಇನ್ನ್ಯು ಉಡುಪಿಯ ರಾಜೀವ್ ನಗರದಲ್ಲಿನ ಎಸ್ಸಿ ಎಸ್ಟಿ ಕಾಲೋನಿಗೆ ಭೇಟಿ ನೀಡಿದಾಗ ಅಲ್ಲಿನ ಜನರು ಇಂದಿಗು ಪ್ರತಿದಿನ ನೀರಿನ ಸಮಸ್ಯೆ ಎದುರಿಸುವುದು ಕಂಡುಬಂದಿದೆ. ಮೂರು ದಿನಗಳಲ್ಲಿ ಒಮ್ಮೆ ಬರುವ ನೀರಿಗಾಗಿ ಮನೆಯಲ್ಲಿರುವ ಎಲ್ಲಾ ಪಾತ್ರೆಗಳನ್ನು ಬಳಸಲಾಗುತ್ತದೆ. "ನನ್ನ ಮಗಳು ಎಂಕಾಂ ಪದವೀಧರೆ. ಆದರೆ ಸರ್ಕಾರಿ ಉದ್ಯೋಗ ಸಿಗುತ್ತಿಲ್ಲ.. ಉಡುಪಿಯ ಗಾಜಿನ ಕಾರ್ಖಾನೆಯಲ್ಲಿ ಸಣ್ಣ ಕೆಲಸಕ್ಕೆ ಸೇರಿ ದುಡಿಯಬೇಕಾಗಿದೆ."ಕಾಲೋನಿಯ ನಿವಾಸಿ ಜಿ. ತಿಮ್ಮ ಎಂಬುವವರು ಹೇಳಿದ್ದಾರೆ.ಈ ಕಾಲೋನಿಯ ಹೆಚ್ಚಿನ ಮಹಿಳೆಯರು ಮನೆಗೆಲಸ, ಬಳೆ ಕಾರ್ಕಾನೆ, ಗಾಜಿನ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.. ಯಾವುದೇ ಸಂಘಟಿತ ಕ್ಷೇತ್ರದ ಉದ್ಯೋಗಗಳು ಇಲ್ಲಿಲ್ಲವಾಗಿ ಪುರುಷರು ಸಹ ಕೂಲಿ ಕಾರ್ಮಿಕರಾಗಿ ದಿನದ ಸಂಬಳಕ್ಕೆ ದುಡಿಉತ್ತಿದ್ದಾರೆ."ನಾನು ಹಿಂದೆ ಪಕ್ಷವೊಂದಕ್ಕೆ ಸೇರಿದ್ದೆ. ಆದರೆ ಚುನಾವಣೆ ಮುಗಿದ ಬೆನ್ನಲ್ಲೇ ನಾಯಕರು ನಮ್ಮನ್ನು ಮರೆಯುತ್ತಾರೆ" ಜಗದೀಶ್ ಜೆ ಎಂಬುವವರು ಹೇಳಿದ್ದಾರೆ.