ಈ ನಡುವೆ ಸಿ.ಎಂ.ಇಬ್ರಾಹಿಂ ಓರ್ವ ತಲೆಹಿಡುಕ ಎಂಬ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಗೆ ತೀಕ್ಷ್ಣವಾಗಿ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ, 'ನಾವು ತಲೆ ಹಿಡಿಯುವವರಲ್ಲ, ಪಾದ ಹಿಡಿಯುವವರು. ಜನರ ಆಶೀರ್ವಾದವೇ ನಮಗೆ ಶ್ರೀರಕ್ಷೆ. ಚುನಾವಣೆ ವೇಳೆಯಲ್ಲಿ ಇದೆಲ್ಲಾ ಸಹಜ. ಬಳಿಕ ಅವರೂ ಸರಿಯಾಗುತ್ತಾರೆ. ಅಲ್ಲಿಯ ತನಕ ಕೆ.ಎಸ್.ಈಶ್ವರಪ್ಪ ಅವರು ಮೂರು ತಿಂಗಳು ಯಾವುದಾದರೊಂದು ಮಠ ಸೇರಿಕೊಳ್ಳುವುದು ಉತ್ತಮ ಎಂದು ವ್ಯಂಗ್ಯವಾಡಿದ್ದಾರೆ.