ಬೆಂಗಳೂರು: ರಾಜಕೀಯ ಪ್ರಜ್ಞೆ ಇರುವ ವ್ಯಕ್ತಿಗೆ ಆಳುವ ಪಕ್ಷವನ್ನು ಪ್ರಶ್ನೆ ಮಾಡುವ ಶಕ್ತಿ ಇರಬೇಕು. ಸಮಾಜದಲ್ಲಿ ಹೊಸ ಬದಲಾವಣೆ, ಕ್ರಿಯಾಶೀಲ ಸಮಾಜ ನಿರ್ಮಾಣಕ್ಕೆ ಪರ್ಯಾಯ ರಾಜಕಾರಣ ಬೇಕು. ಈ ಎಲ್ಲಾ ಉದ್ದೇಶಗಳ ಈಡೇರಿಕೆಗಾಗಿ ಚುನಾವಣೆಗೆ ಇಳಿದಿದ್ದೇನೆಯೇ ಹೊರತು ಗೌರಿ ಲಂಕೇಶ್ ಹತ್ಯೆ ಹೋರಾಟದಿಂದ ಅಲ್ಲ. ತಾವು ರಾಜಕೀಯಕ್ಕೆ ಬರುವುದಕ್ಕೂ ಗೌರಿ ಹತ್ಯೆ ಹೋರಾಟಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಟ ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಸ್ಪಷ್ಟಪಡಿಸಿದ್ದಾರೆ.