ಬೆಂಗಳೂರು: ಕೆಲವೇ ದಶಕಗಳ ಹಿಂದೆ, ಮೈಸೂರುನಲ್ಲಿ ಯಾವುದೇ ಚುನಾವಣೆಗಳಿರಲಿಲ್ಲ, ಇದ್ದರೂ ರಾಜವಂಶಸ್ಥರು ಇದರಲ್ಲಿ ಭಾಗವಹಿಸುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ರಾಜಕಾರಣದಲ್ಲಿ ಹಣ, ಅಧಿಕಾರ, ಜಾತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವ ಕಾರಣದಿಂದ ರಾಜಮನೆತನವು ಸ್ವಯಂಪ್ರೇರಿತವಾಗಿ ರಾಜಕೀಯದಿಂದ ದೂರ ಉಳಿದಿದೆ.ಒಂದು ಕಾಲದಲ್ಲಿ ದೇವರೆಂದೇ ಕರೆಸಿಕೊಳ್ಳುತ್ತಿದ್ದ ರಾಜಮನೆತನದ ಸದಸ್ಯರು ಇಂದು ಸಕ್ರಿಯ ರಾಜಕೀಯದಿಂದ ದೂರಾಗಿರುವುದು ಕ್ಷೇತ್ರದಲ್ಲಿ ಸುತ್ತಾಡುವ ಯಾರಿಗಾದರೂ ಮೇಲ್ನೋಟಕ್ಕೆ ಕಾಣಿಸುತ್ತದೆ. ರಾಜ್ಯ ಸರ್ಕಾರದೊಡನೆ ಜ್ಕಾನುನಿನ ಹೋರಾಟ ನಡೆಸಿರುವ ರಾಜವಂಶ ಜಾತಿ ರಾಜಕಾರಣದ ಕಗ್ಗಂಟಿನಲ್ಲಿ ಸಿಲುಕಲು ಒಪ್ಪುತ್ತಿಲ್ಲ. ಆದರೂ ರಾಜಮನೆತನಕ್ಕೆ ಗೌರವ ನೀಡುವ ಯಾರನ್ನಾದರೂ ಬೆಂಬಲಿಸಲು ನಿರ್ಧರಿಸಿದೆ ಎನ್ನಲಾಗಿದೆ. ರಾಜವಂಶದ 26ನೇ ತಲೆಮಾರಿನವರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ತಾವು 1984, 1996 ಹಾಗು 1998ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರು.