ಅಂತೆಯೇ 'ಸಾಧ್ಯವಾದ ಕಡೆಗಳಲ್ಲಿ ಪ್ರಚಾರ ಮಾಡ್ತಿದ್ದೇವೆ. ಇದುವರೆಗೂ ಎಲ್ಲರೂ ಹಣ, ಹೆಂಡ ತೋರಿಸಿಕೊಂಡೆ ಬರುತ್ತಿದ್ದಾರೆ. ಈ ಬಾರಿ ಜನ ನಮಗೆ ಎಷ್ಟು ಸಹಕಾರ ನೀಡುತ್ತಾರೆ ನೊಡೋಣ. ಪ್ರಜಾಕೀಯದಲ್ಲಿ ಪ್ರಜೆಗಳೆ ಪ್ರಭುಗಳು. ಜನಗಳಿಗ ಏನು ಬೇಕು ಅಂತಾ ಮಾತಾಡಿದ್ರೆ ಅದನ್ನು ಹುಚ್ಚತನ ಅನ್ನೋದಾದ್ರೆ ಅದೇ ಹುಚ್ಚುತನ ನಮಗೆ ಬೇಕು. ಹಣ, ಹೆಂಡ ಹಂಚಿ ಹುಚ್ಚತನ ಮಾಡೋ ಬದಲು ನಮ್ಮ ತತ್ವವೇ ಸರಿ ಇದೆ. ನಮ್ಮ ಅಭ್ಯರ್ಥಿಗಳು ಗೆದ್ದಲ್ಲಿ, ಸ್ವಂತ ನಿರ್ಧಾರ ತಗೋಳೋದಿಲ್ಲ. ಜನರ ಬಳಿ ಬಂದು ಕೇಳ್ತೆವೆ, ಅವರು ಹೇಳಿದ ಪಾರ್ಟಿಗೆ ಬೆಂಬಲ ಕೊಡುತ್ತೇವೆ ಎಂದು ಉಪೇಂದ್ರ ಹೇಳಿದರು.