ಇನ್ನು ಬಾಲಾಕೋಟ್ ಮೇಲೆ ದಾಳಿ ನಡೆಸಿ ಭಯೋತ್ಪಾದಕರ ಹೃದಯಾಂತರಾಳದಲ್ಲಿ ಭಯವನ್ನು ಹುಟ್ಟಿಸಿದ್ದೇವೆ ಎಂದು ಹೇಳುವ ನಿಮ್ಮ ಅಧಿಕಾರಾವಧಿಯಲ್ಲಿ ಅತಿ ಹೆಚ್ಚು ಭಯೋತ್ಪಾದಕರ ದಾಳಿಗಳಾಗಿವೆ. ಗಡಿ ಪ್ರದೇಶದಲ್ಲಿ ಉಗ್ರರ ದಾಳಿಯಲ್ಲಿ 498 ಸೈನಿಕರು ಹುತಾತ್ಮರಾಗಿದ್ದಾರೆ. 278 ಮುಗ್ದ ನಾಗರೀಕರು ಸಾವನ್ನಪ್ಪಿ, 542 ಯುವಕರು ಉಗ್ರಗಾಮಿಗಳಾಗಿ ಪರಿವರ್ತನೆಯಾಗಿದ್ದಾರೆ. ಕಾಂದಹಾರ್ ಅಪರಹಣ, ಉಗ್ರ ಅಜರ್ ಮಸೂದ್ ನನ್ನು ಬಿಡುಗಡೆ ಮಾಡಿದ್ದು ,ಪಠಾಣ್ ಕೋಟ್ ಮೇಲೆ ದಾಳಿ, ಸಂಸತ್ ಮೇಲೆ ದಾಳಿ, ಪುಲ್ವಾಮಾ ದಾಳಿ, ಅಮರ್ ನಾಥ್ ಯಾತ್ರಾರ್ಥಿಗಳ ಮೇಲೆ ದಾಳಿಗಳು ಬಿಜೆಪಿ ಸರ್ಕಾರದ ವೈಫಲ್ಯಗಳಲ್ಲವೇ ಎಂದು ದಿನೇಶ್ ಪ್ರಶ್ನಿಸಿದ್ದಾರೆ.