ದೇವೇಗೌಡರ ಕುಟುಂಬದ ದೇವರು ಹರದನಹಳ್ಳಿ ಈಶ್ವರ ದೇಗುಲದ ಮೇಲೆ ಹಾಗೂ ದೇವಾಲಯದ ಅರ್ಚಕ ಪ್ರಕಾಶ್ ಭಟ್ ಅವರ ಮನೆ ಮೇಲಿನ ದಾಳಿ ಖಂಡಿಸಿದ ಸಿಎಂ, ಐಟಿ ಇಲಾಖೆಯನ್ನು ಬಿಜೆಪಿಯ ಇಲಾಖೆ ಎಂದು ಟೀಕಿಸಿದ್ದಾರೆ. ಅಲ್ಲದೇ, ಈಶ್ವರನ ದೇವಾಲಯದ ಒಳಕ್ಕೆ ಕಾಲಿಟ್ಟಿರುವುದರಿಂದ ಬಿಜೆಪಿಯನ್ನು ಆ ಶಿವ ಈ ಚುನಾವಣೆಯಲ್ಲಿ ಧೂಳೀಪಟ ಮಾಡಲಿದ್ದಾನೆ ಎಂದು ಗುಡುಗಿದ್ದಾರೆ.