ಸುಮಲತಾ ಮಾಜಿ ಸಿಎಂ ಜಯಲಲಿತಾರನ್ನು ಮೀರಿಸುವಂತಾ ಮಾಯಾಂಗನೆ: ಎಲ್ಆರ್ ಶಿವರಾಮೇಗೌಡ

ಜೆಡಿಎಸ್ ಸಂಸದ ಎಲ್ಆರ್ ಶಿವರಾಮೇಗೌಡರು ಮತ್ತೆ ಸುಮಲತಾ ಅಂಬರೀಶ್ ವಿರುದ್ಧ ನಾಲಿಗೆ ಹರಿಬಿಟ್ಟಿದ್ದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತೆ ಜಯಲಲಿತಾರನ್ನು ಮೀರಿಸುವಂತಾ ಮಾಯಾಂಗನೆ.
ಸುಮಲತಾ ಅಂಬರೀಶ್-ಎಲ್ಆರ್ ಶಿವರಾಮೇಗೌಡ
ಸುಮಲತಾ ಅಂಬರೀಶ್-ಎಲ್ಆರ್ ಶಿವರಾಮೇಗೌಡ
ಮಂಡ್ಯ: ಜೆಡಿಎಸ್ ಸಂಸದ ಎಲ್ಆರ್ ಶಿವರಾಮೇಗೌಡರು ಮತ್ತೆ ಸುಮಲತಾ ಅಂಬರೀಶ್ ವಿರುದ್ಧ ನಾಲಿಗೆ ಹರಿಬಿಟ್ಟಿದ್ದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತೆ ಜಯಲಲಿತಾರನ್ನು ಮೀರಿಸುವಂತಾ ಮಾಯಾಂಗನೆ. ಇಂದು ಮಂಡ್ಯದಲ್ಲಿ ಓಡಾಡುತ್ತಿದ್ದಾರೆ ಹುಷಾರಾಗಿರೀ ಎಂದು ಹೇಳಿದ್ದಾರೆ.
ಮಂಡ್ಯದ ನಾಗಮಂಗಲದಲ್ಲಿ ನಡೆದ ಜೆಡಿಎಸ್-ಕಾಂಗ್ರೆಸ್ ಜಂಟಿ ಸಮಾವೇಶದಲ್ಲಿ ಮಾತನಾಡಿದ ಎಲ್ಆರ್ ಶಿವರಾಮೇಗೌಡ ಮತ್ತೆ ಮಂಡ್ಯ ಲೋಸಕಭೆ ಕ್ಷೇತ್ರದ ಸ್ವತಂತ್ರ್ಯ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಹಿಂದೆ ಶಿವರಾಮೇಗೌಡ ಅವರು ಸುಮಲತಾ ಅಂಬರೀಶ್ ಅವರನ್ನು ಗೌಡ್ತಿ ಅಲ್ಲ ನಾಯ್ಡು ಎಂದು ಹೇಳಿದ್ದರು. ನಾಯ್ಡುಗೆ ಮತ ನೀಡುವ ಮೂಲಕ ಮಂಡ್ಯವನ್ನು ನಾಯ್ಡು ಮಯ ಮಾಡಬೇಡಿ ಎಂದು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com