ನಟ ದರ್ಶನ್ ಗಂತೂ ಮಂಡ್ಯದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು. ಪ್ರಚಾರಕ್ಕೆ ಎಲ್ಲಿ ಹೋದರಲ್ಲಿ ಸ್ವಾಗತಿಸುವ ಜನರು ದರ್ಶನ್ ಗೆ ತಮ್ಮ ನೆಚ್ಚಿನ ನಟನಲ್ಲಿ ಹಲವು ಬೇಡಿಕೆಯಿಡುತ್ತಾರೆ. ನಿನ್ನೆ ಕೆಆರ್ ಪೇಟೆಯಲ್ಲಿ ಸುಮಲತಾ ಪರ ಪ್ರಚಾರ ನಡೆಸಿದ ಅವರಿಗೆ ಜನರು ರೈತರ ಕಷ್ಟ ಅರಿವಾಗಬೇಕಾದರೆ ಹಾಲು ಕರೆಯಿರಿ ಎಂದು ಸವಾಲ್ ಹಾಕಿದ್ದರು. ಅದನ್ನು ಕೇಳಿದ ದರ್ಶನ್ ಸವಾಲನ್ನು ಸ್ವೀಕರಿಸಿ ತಮ್ಮ ಅಭಿಮಾನಿಯ ಹಸುವಿನ ಹಾಲು ಕರೆದು ತೋರಿಸಿದರು.