ಪ್ರಚಾರ ವೇಳೆ ಹಸುವಿನ ಹಾಲು ಕರೆದ ನಟ ದರ್ಶನ್: ಸುಮಲತಾ ಹೇಳಿದ್ದೇನು?

ಸಕ್ಕರೆ ನಾಡು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರವಾಗಿ ನಟರಾದ ದರ್ಶನ್ ಮತ್ತು ...
ಹಸುವಿನ ಹಾಲು ಕರೆಯುತ್ತಿರುವ ನಟ ದರ್ಶನ್
ಹಸುವಿನ ಹಾಲು ಕರೆಯುತ್ತಿರುವ ನಟ ದರ್ಶನ್
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರವಾಗಿ ನಟರಾದ ದರ್ಶನ್ ಮತ್ತು ಯಶ್ ತಮ್ಮದೇ ಶೈಲಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ.
ನಟ ದರ್ಶನ್​ ಗಂತೂ ಮಂಡ್ಯದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು. ಪ್ರಚಾರಕ್ಕೆ ಎಲ್ಲಿ ಹೋದರಲ್ಲಿ ಸ್ವಾಗತಿಸುವ ಜನರು ದರ್ಶನ್ ಗೆ ತಮ್ಮ ನೆಚ್ಚಿನ ನಟನಲ್ಲಿ ಹಲವು ಬೇಡಿಕೆಯಿಡುತ್ತಾರೆ. ನಿನ್ನೆ ಕೆಆರ್​ ಪೇಟೆಯಲ್ಲಿ ಸುಮಲತಾ ಪರ ಪ್ರಚಾರ ನಡೆಸಿದ ಅವರಿಗೆ ಜನರು ರೈತರ ಕಷ್ಟ ಅರಿವಾಗಬೇಕಾದರೆ ಹಾಲು ಕರೆಯಿರಿ ಎಂದು ಸವಾಲ್​ ಹಾಕಿದ್ದರು. ಅದನ್ನು ಕೇಳಿದ ದರ್ಶನ್ ಸವಾಲನ್ನು ಸ್ವೀಕರಿಸಿ ತಮ್ಮ ಅಭಿಮಾನಿಯ ಹಸುವಿನ ಹಾಲು ಕರೆದು ತೋರಿಸಿದರು.
ಎಲ್ಲರ ಮೆಚ್ಚುಗೆ ಪಡೆದರು.ದರ್ಶನ್​ ಅವರ ಈ ಕಾರ್ಯಕ್ಕೆ ಈಗ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೇ ಸುಮಲತಾ ಕೂಡ ದರ್ಶನ್​ ಕಾರ್ಯಕ್ಕೆ ಭೇಷ್​ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com