ತುಮಕೂರು: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತುಮಕೂರಿಗೆ ಏಕೆ ಪ್ರಚಾರಕ್ಕೆ ಅಗಮಿಸಿಲ್ಲ, ಎಂದು ನೀವೇನಾದರೂ ಅಚ್ಚರಿ ವ್ಯಕ್ತಪಡಿಸಿದ್ದರೆ ಇದಕ್ಕೆ ಅವರು ಎಚ್.ಡಿ. ದೇವೇಗೌಡರ ಎದುರು ಪ್ರಚಾರ ನಡೆಸಲು ಬಯಸುವುದಿಲ್ಲ ಎಂಬುದು ಉತ್ತರವಾಗಿದೆ. ಮೇಲಾಗಿ ಅವರಿಗೆ ಕ್ಷೇತ್ರದಲ್ಲಿನ ತಮ್ಮದೇ ಅಭ್ಯರ್ಥಿ ಬಗೆಗೆ ಹೆಚ್ಚಿನ ಆಸಕ್ತಿ ಇಲ್ಲವೆಂದೂ ಕಾಣುತ್ತಿದೆ.ದೇಶದ ಎಲ್ಲಾ ಬಿಜೆಪಿ ಅಭ್ಯರ್ಥಿಗಳು ತಮ್ಮ ಖ್ಷೇತ್ರಕ್ಕೆ ಮೋದಿ, ಶಾ ಆಗಮಿಸಿದ್ದರೆ ನಮ್ಮ ಗೆಲುವಿಗೆ ಇನ್ನಷ್ಟು ಬಲ ಬರಲಿದೆ ಎಂದು ಭಾವಿಸುತ್ತಾರೆ. ಆದರೆ ತುಮಕುರಿನ ಬಿಜೆಪಿ ಅಭ್ಯರ್ಥಿ ಜಿಎಸ್ ಬಸವರಾಜು ಮಾತ್ರ ಇಂತಹಾ ಭಾವನೆಗಳಿಂದ ದೂರವಿದ್ದಾರೆ ಎಂದು ಮೂಲಗಳು ಹೇಳಿದೆ.ಮಾಜಿ ಕಾಂಗ್ರೆಸಿಗ, ಬಸವರಾಜು 2014 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡರನ್ನು ಪರಾಜಿತಗೊಳಿಸಿದ್ದರು. ಆ ಬಾರಿ ಮೋದಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು.