"ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಕೋಲಾರ, ತುಮಕೂರು, ಕನಕಪುರ ಮತ್ತು ಚಾಮರಾನಗರಗಳಲ್ಲಿ ನನ್ನ ನಾಯಕತ್ವದಲ್ಲಿ ರೋಡ್ ಶೋ ನಡೆಯಲಿದೆ.ಎಂದು ಬಿಜೆಪಿ ರಾಜ್ಯದ ಪ್ರಚಾರ ನಿರ್ವಹಣಾ ಸಮಿತಿಯ ಸಂಚಾಲಕ ಆರ್. ಅಶೋಕ್ ಹೇಳಿದರು. ಅವರು ಈ ರೋಡ್ ಶೋ ಮೂಲಕ ಒಕ್ಕಲಿಗರನ್ನು ಒಗ್ಗಟ್ತಾಗಿಸಿರುವುದು, ಬಿಜೆಪಿಯಲ್ಲಿ ಅವರ ಪ್ರಾಬಲ್ಯ ಹೆಚ್ಚಳ ಂಆಡುವ ಉದ್ದೇಶವಿದೆ ಎಂಬುದನ್ನು ನಿರಾಕರಿಸಿದ್ದಾರೆ. ಆದರೆ ಒಕ್ಕಲಿಗರಲ್ಲಿ ಬಲವಾಗಿರುವ ಜೆಡಿಎಸ್ ಪರ ಒಲವನ್ನು ಹೊಡೆದು ಅವರನ್ನು ಬಿಜೆಪಿಯತ್ತ ಒಲವು ಮೂಡಿಸುವಂತೆ ಮಾಡಲಾಗುವುದು ಎಂಡು ಹೇಳಿದ್ದಾರೆ. ಯಡಿಯೂರಪ್ಪ ತಾವು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಎಲ್ಲಾ ಸಿದ್ದತೆ ನಡೆಸಿದ್ದಾರೆ. ಈ ವೇಳೆ ಓರ್ವ ಒಕ್ಕಲಿಗ ಆ ಸ್ಥಾನಕ್ಕೇರುವದಕ್ಕಾಗಿ ಮಹತ್ವಾಕಾಂಕ್ಷೆ ಹೊಂದಿದ್ದಾರೆಂದು ವಿಶ್ಲೇಷಕರು ಹೇಳುತ್ತಾರೆ.