ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು, ಬಾಲಾಕೋಟ್ ಮೇಲೆ ದಾಳಿ ನಡೆದಾಗ ಪಾಕಿಸ್ತಾನ ಮಲಗಿತ್ತು. ಆದರೆ ಬೆಳಗ್ಗೆ ಪಾಕ್ ಟ್ವೀಟ್ ಮೂಲಕ ಈ ದಾಳಿಯನ್ನು ಒಪ್ಪಿಕೊಂಡಿತ್ತು. ಆದರೆ, ಮಹಾಮೈತ್ರಿ ಮಾಡಿಕೊಂಡಿರುವ ಇವರು ದಾಳಿ ನಡೆದಿಲ್ಲ, ದಾಳಿ ನಡೆದಿದ್ದರೆ ಪುರಾವೆ ಒದಗಿಸಿ ಎನ್ನುತ್ತಿದ್ದಾರೆ. ಇದು ಅವರ ರಾಷ್ಟ್ರೀಯ ಹಿತಾಸಕ್ತಿಯನ್ನು ಬಂಬಿಸುತ್ತದೆ ಎಂದರು.