ಕಾರ್ಯಕ್ರಮದ ಆರಂಭದಲ್ಲೇ ನಡೆದ ಚುಂಬನ ಸುರಿಮಳೆಗೆ ವೇದಿಕೆಯಲ್ಲಿದ್ದವರೆಲ್ಲರೂ ಗಾಬರಿ, ಏನು ನಡೆಯುತ್ತಿದೆ ಎಂದು ಅರಿಯುವ ಮೊದಲೇ ಕ್ಷಮಾರ್ಧದಲ್ಲಿ ಅಭಿಮಾನಿ ಚುಂಬನ ನೀಡಿ ಬಿಟ್ಟಿದ್ದ. ಇದರಿಂದ ತುಸು ಕೋಪಗೊಂಡಂತೆ ಕಂಡುಬಂದ ಸಿದ್ದರಾಮಯ್ಯ ತಕ್ಷಣ ಆತನನ್ನು ದೂರ ಸರಿಸಿ ಕೋಪದಲ್ಲಿ ದುರುಗುಟ್ಟಿ ನೋಡಿದರು. ಅಷ್ಟರಲ್ಲಾಗಲೇ ಆತ ಸಿದ್ದರಾಮಯ್ಯನವರಿಂದ ಬಲು ದೂರ ಸರಿದುಬಿಟ್ಟಿದ.